HEALTH TIPS

ಕಾನತ್ತೂರು ನೆಯ್ಯಂಗಯ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಮಡಿರುವ ಬಗ್ಗೆ ವದಂತಿ

              ಮುಳ್ಳೇರಿಯ:  ಮುಳಿಯಾರು ಕಾನತ್ತೂರು ಪ್ರದೇಶದಲ್ಲಿ ಚಿರತೆ ಸೇರಿದಂತೆ ವನ್ಯಮೃಗಗಳ ಸಂಚಾರದ ಬಗ್ಗೆ ನಾಗರಿಕರಲ್ಲಿ ಭೀತಿ ಮುಂದುವರಿದಿದೆ. ಕಾನತ್ತೂರು ನೆಯ್ಯಂಗಯದಲ್ಲಿ ರಾಘವನ್ ಎಂಬವರ ಮನೆಯಿಂದ ಸುಮಾರು 75ಮೀ. ಅಂತರದಲ್ಲಿ ದೊಡ್ಡ ಗಾತ್ರದ ಚಿರತೆಯೊಂದು ಕಂಡುಬಂದಿರುವುದಾಗಿ ಸ್ಥಳೀಯ ನಿವಾಸಿ ಗಂಗಾಧರನ್ ನಾಯರ್ ತಿಳಿಸಿದ್ದಾರೆ. 

       ಇದೇ ಪ್ರದೇಶದಲ್ಲಿ ಇನ್ನೊಂದು ಚಿರತೆ ಕಂಡು ಬಂದಿರುವುದಾಘಿಯೂ ವದಂತಿ ಹಬ್ಬಿದ್ದು, ಈ ಬಗ್ಗೆ ಅರಣ್ಯಾಧಿಕಾರಿಗಳೂ ಜಾಗೃತರಾಗಿದ್ದಾರೆ. ಅರಣ್ಯ ಪ್ರದೇಶದಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮರಾಗಳನ್ನು ತಪಾಸಣೆ ನಡೆಸಲಾಗಿದ್ದು, ಚಇರತೆ ಸಂಚಾರದ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ಜೂ. 17ರಂದು ಇರಿಯಣ್ಣಿ ತೋಣಿಪಳ್ಳ ನಿವಾಸಿ ನಾರಾಯಣನ್ ಎಂಬವರ ದೊಡ್ಡ ಗಾತ್ರದ ಸಾಕುನಾಯಿಯನ್ನು ವನ್ಯಮೃಗವೊಂದು ಎತ್ತಿಕೊಂಡು ಸಆಘಿದ್ದು, ಇದು ಚಿರತೆಯಾಗಿರುವುದಾಗಿ ಸ್ಥಳೀಯರು ಸಂಶಯಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries