HEALTH TIPS

ಯುನೆಸ್ಕೋದ ಸಾಹಿತ್ಯ ನಗರ ಬಿರುದು ಪಡೆದ ದೇಶದ ಮೊದಲ ನಗರ ಕೋಝಿಕೋಡ್: ಸಚಿವರಿಂದ ಅಧಿಕೃತ ಘೋಷಣೆ

                 ಕೋಝಿಕ್ಕೋಡ್: ಯುನೆಸ್ಕೋ ಸಾಹಿತ್ಯ ನಗರ ಸ್ಥಾನಮಾನ ಪಡೆದ ಭಾರತದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಕೋಝಿಕ್ಕೋಡ್ ಪಾತ್ರವಾಗಿದೆ. ನಿನ್ನೆ ಸಂಜೆ ತಾಳಿ ಕಂಡಂಕುಲಂನಲ್ಲಿರುವ ಮುಹಮ್ಮದ್ ಅಬ್ದುರ್ರಹಿಮಾನ್ ಮೆಮೋರಿಯಲ್ ಜುಬಿಲಿ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಎಂ.ಬಿ.ರಾಜೇಶ್ ಅಧಿಕೃತ ಘೋಷಣೆ ಮಾಡಿದರು.

               ಕಳೆದ ವರ್ಷ ಅಕ್ಟೋಬರ್ 31 ರಂದು, ಕೋಝಿಕೋಡ್ ಅನ್ನು ಯುನೆಸ್ಕೋ ಸಾಹಿತ್ಯದ ನಗರವೆಂದು ಗುರುತಿಸಿದೆ. ಮುಖ್ಯಮಂತ್ರಿ ಅಧಿಕೃತ ಘೋಷಣೆ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಪಾಲಿಕೆ ಇತ್ತು. ಆದರೆ ಲೋಗೋ ಪ್ರದರ್ಶನ ಮತ್ತು ವೆಬ್‍ಸೈಟ್ ಬಿಡುಗಡೆಯನ್ನು ಸಚಿವ ಪಿಎ ಮುಹಮ್ಮದ್ ರಿಯಾಝ್ ಮಾಡಿದ್ದಾರೆ. ಎಂ.ಟಿ.ವಾಸುದೇವನ್ ನಾಯರ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳದ ಮುಖ್ಯಮಂತ್ರಿಯ ಪಿಣರಾಯಿ ವಿಜಯನ್ ಅವರ ಹಠದಿಂದ ಅವರನ್ನು ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಅಧಿಕೃತ ಘೋಷಣೆಯಿಂದ ಹೊರಗಿಡಲಾಗುತ್ತಿದೆ ಎಂಬ ಆರೋಪಗಳಿವೆ.

            ಕೋಝಿಕೋಡ್ ನಗರವನ್ನು ಯುನೆಸ್ಕೊ ದೇಶದ ಮೊದಲ ಸಾಹಿತ್ಯ ನಗರವಾಗಿ ಆಯ್ಕೆ ಮಾಡಿದ ಹೆಮ್ಮೆಯ ಕ್ಷಣಕ್ಕೆ ಮುಖ್ಯಮಂತ್ರಿ ಮಾತ್ರ ಸಾಕ್ಷಿಯಾಗದಿರುವುದು ಸರಿಯಲ್ಲ ಎಂದು ಪಾಲಿಕೆಯಲ್ಲಿನ ವಿರೋಧ ಪಕ್ಷವೂ ಬೊಟ್ಟು ಮಾಡಿದೆ. ಎನ್‍ಜಿಒ ಯೂನಿಯನ್ ರಾಜ್ಯ ಸಮ್ಮೇಳನದ ಉದ್ಘಾಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ನಿನ್ನೆ ಕೋಝಿಕ್ಕೋಡ್‍ನಲ್ಲಿದ್ದರು. ಆದರೆ ಅಧಿಕೃತ ಘೋಷಣೆಗೆ ಕಾಯದೆ ವಾಪಸಾಗಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries