HEALTH TIPS

ಗೃಹ ಖಾತೆಯನ್ನು ಟೀಕಿಸಿದ ಸಿಪಿಎಂ ರಾಜ್ಯ ಸಮಿತಿ: ಉತ್ತರ ನೀಡದೆ ತೆರಳಿದ ಮುಖ್ಯಮಂತ್ರಿ

                 ತಿರುವನಂತಪುರಂ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿರ್ವಹಿಸುತ್ತಿರುವ ಗೃಹ ಇಲಾಖೆಯನ್ನು ಸಿಪಿಎಂ ರಾಜ್ಯ ಸಮಿತಿ ಟೀಕಿಸಿದೆ.

                   ಸರ್ಕಾರವನ್ನು ಪೇಚಿಗೆ ಸಿಲುಕಿಸುವ ಕಾರ್ಯಗಳು ಗೃಹ ಇಲಾಖೆಯಿಂದ ಬಂದಿದ್ದು, ಪೋಲೀಸರನ್ನು ಇತರ ಶಕ್ತಿಗಳು ನಿಯಂತ್ರಿಸುತ್ತಿವೆ ಎಂದು ರಾಜ್ಯ ಸಮಿತಿ ಅಭಿಪ್ರಾಯಪಟ್ಟಿದೆ. ಆದರೆ ರಾಜ್ಯ ಸಮಿತಿಯಲ್ಲಿ ಟೀಕೆಗೆ ಉತ್ತರ ನೀಡದೆ ಮುಖ್ಯಮಂತ್ರಿ ಹೊರನಡೆದರು.

                  ಮುಖ್ಯಮಂತ್ರಿಯವರ ಶೈಲಿಗೆ ತೀವ್ರ ಟೀಕೆ ವ್ಯಕ್ತವಾದ ಬಳಿಕ ರಾಜ್ಯ ಸಮಿತಿಯು ಮುಖ್ಯಮಂತ್ರಿ ನಿರ್ವಹಿಸುತ್ತಿರುವ ಗೃಹ ಇಲಾಖೆಯನ್ನೂ ಟೀಕಿಸಿದೆ. ಸರ್ಕಾರವನ್ನು ತಿರುಚುವ ಕ್ರಮ ಸÀರ್ಕಾರದ ಕಡೆಯಿಂದ ಬಂದಿದ್ದು, ಐಜಿ ರ್ಯಾಂಕ್ ಮೇಲ್ಪಟ್ಟ ಕೆಲ ಅಧಿಕಾರಿಗಳ ಕಾರ್ಯಕ್ಕೆ ಹಿನ್ನಡೆಯಾಗಿದೆ ಎಂಬ ಟೀಕೆ ವ್ಯಕ್ತವಾಗಿದೆ.

                 ಅನೇಕ ಪೋಲೀಸರು ಸ್ಥಳೀಯ ಮಟ್ಟದಲ್ಲಿ ದರೋಡೆಕೋರರು ಮತ್ತು ಅಪರಾಧಿಗಳೊಂದಿಗೆ ಸಂಬಂಧವನ್ನು ನಿರ್ವಹಿಸುತ್ತಾರೆ. ಮತ್ತು ಕೆಲವು ಪೋಲೀಸರು ಸುಲಿಗೆ ನಡೆಸುವವರೊಂದಿಗೆ ಸಂಪರ್ಕ ಹೊಂದಿದ್ದಾರೆ. ಅಂತಹ ಪೋಲೀಸರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಸಿಪಿಎಂ ಹೇಳಿದೆ. ರಾಜ್ಯ ಸಮಿತಿಯಲ್ಲಿ ಈ ಟೀಕೆ ವ್ಯಕ್ತವಾಗಿದೆ.

                   ಇಡುಕ್ಕಿ ಜಿಲ್ಲೆಯ ಪ್ರತಿನಿಧಿಗಳು ಮುಖ್ಯಮಂತ್ರಿಯನ್ನು ಹೊರತುಪಡಿಸಿ, ಇತರ ಕೆಲವು ಶಕ್ತಿ ಕೇಂದ್ರಗಳು ಪೋಲೀಸರನ್ನು ನಿಯಂತ್ರಿಸುತ್ತವೆ ಎಂದು ಟೀಕಿಸಿದರು. ಪೋಲೀಸರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ, ವಿಶೇಷವಾಗಿ ಗುಂಪು ಹಿಂಸಾಚಾರವನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ನಿರಂತರ ಹತ್ಯೆಗಳು ರಾಜ್ಯದಲ್ಲಿ ಭಯೋತ್ಪಾದನೆಯನ್ನು ಸೃಷ್ಟಿಸಿವೆ. ಮಹಿಳೆಯರ ಸುರಕ್ಷತೆಯಲ್ಲೂ ಪೋಲೀಸರು ವಿಶ್ವಾಸಾರ್ಹತೆ ಕಳೆದುಕೊಂಡಿದ್ದಾರೆ. ಮಾಧ್ಯಮಗಳ ವಿರುದ್ಧ ಪೆÇಲೀಸರ ಕ್ರಮವೂ ಉಲ್ಟಾ ಹೊಡೆದಿದೆ.

             ತ್ರಿಶೂರ್ ಜಿಲ್ಲೆಯಿಂದ ಗೃಹ ಇಲಾಖೆ ವಿರುದ್ಧ ರಾಜಕೀಯ ಟೀಕೆ ವ್ಯಕ್ತವಾಗಿತ್ತು. ತ್ರಿಶೂರ್ ಪೂರಂನಲ್ಲಿ ಪೆÇಲೀಸರ ಮಧ್ಯಪ್ರವೇಶವು ಲೋಕಸಭೆ ಚುನಾವಣೆಯಲ್ಲಿ ಸುರೇಶ್ ಗೋಪಿಯವರಿಗೆ ಗೆಲುವು ತರಲು ನೆರವಾಯಿತು ಎಂದು ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಪತ್ರಕರ್ತರು ಹಾಗೂ ಮಾಧ್ಯಮ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಿರುವ ಕ್ರಮಕ್ಕೆ ರಾಜ್ಯ ಸಮಿತಿಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries