ಕಾಸರಗೋಡು: ಕುಟುಂಬಶ್ರೀಯ 'ಹಿತ್ತಿಲ ಮಲ್ಲಿಗೆ'ಯೋಜನೆಯನ್ವಯ ಪಡೆದ ಸಾಲದ ಮೊತ್ತವನ್ನು ಬ್ಯಾಂಕ್ ಖಾತೆಗೆ ಪಾವತಿಸುವಲ್ಲಿ ಲೋಪವೆಸಗಿರುವ ಪ್ರಕರಣಕ್ಕೆ ಸಂಬಂಧಿಸಿ ಕೋಟಿಕುಳಂನ ಕುಟುಂಬಶ್ರೀ ಸಂಘವೊಂದರ ಸದಸ್ಯೆ ಸಾಯಿರಾಬಾನು ಎಂಬಾಕೆ ವಿರುದ್ಧ ಬೇಕಲ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಕುಟುಂಬಶ್ರೀ ಅಧ್ಯಕ್ಷೆ ಕೋಟಿಕುಳಂ ನಿವಾಸಿ ಆಯಿಷತ್ ಸೈದಾ ಅವರ ದೂರಿನ ಮೇರೆಗೆ ಈ ಕೇಸು. 'ಹಿತ್ತಿಲ ಮಲ್ಲಿಗೆ'ಯೋಜನೆಯನ್ವಯ ಬ್ಯಾಂಕಿನಿಂದ ಪಡೆದಿದ್ದ ಸಾಲದ ಮೊತ್ತ 1211760ರೂ. ಮೊತ್ತದಲ್ಲಿ 854920 ಮಾತ್ರ ಪಾವತಿಸಿ, 356840ರೂ. ವಂಚನೆಯೆಸಗಲಾಗಿದೆ ಎಂದು ಪೊಲೀಸರಿಗೆ ನೀಡಿದ ದಉರಿನಲ್ಲಿ ತಿಳಿಸಲಾಗಿದೆ.