HEALTH TIPS

ಹಿ.ಪ್ರದೇಶ ಉಪಚುನಾವಣೆ: ಪತ್ನಿಯನ್ನು ಕಣಕ್ಕಿಳಿಸುವುದು ಹೈಕಮಾಂಡ್‌ ನಿರ್ಧಾರ- ಸುಖು

        ಶಿಮ್ಲಾ: 'ನನ್ನ ಪತ್ನಿ ಚುನಾವಣೆಯಲ್ಲಿ ಸ್ಪರ್ಧಿಸುವುದು ನನಗೆ ಇಷ್ಟವಿಲ್ಲ. ಆದರೆ ಅವರನ್ನು ದೆಹರಾ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಪಕ್ಷದ ಹೈಕಮಾಂಡ್‌ ನಿರ್ಧರಿಸಿದೆ' ಎಂದು ಕಾಂಗ್ರೆಸ್‌ ಹಿರಿಯ ನಾಯಕ, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖು ಅವರು ಬುಧವಾರ ಹೇಳಿದರು.

          ರಾಜ್ಯದ ಉಪಚುನಾವಣೆಯು ಜುಲೈ 10ರಂದು ನಡೆಯಲಿದೆ. ಕಾಂಗ್ರೆಸ್‌ನ ಅಭ್ಯರ್ಥಿ ಪಟ್ಟಿಯಲ್ಲಿ ಸುಖು ಪತ್ನಿ ಕಮಲೇಶ್‌ ಠಾಕೂರ್‌ ಅವರ ಹೆಸರೂ ಇದೆ. ಎರಡು ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆ ಆಗಿದ್ದ ಮತ್ತು ಈ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿರುವ ಹೋಶಿಯಾರ್‌ ಸಿಂಗ್‌ಗೆ ಎದುರಾಳಿಯಾಗಿ ಕಮಲೇಶ್‌ ಸ್ಪರ್ಧಿಸಲಿದ್ದಾರೆ.

         'ಲೋಕಸಭೆ ಚುನಾವಣೆಯಲ್ಲಿ ಕಮಲೇಶ್‌ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ನಿರ್ಧರಿಸಿತ್ತು. ಒಂದು ಕುಟುಂಬದಿಂದ ಒಬ್ಬರು ಮಾತ್ರ ರಾಜಕಾರಣದಲ್ಲಿ ಇರಬೇಕು ಎಂದು ನಾನು ನಂಬಿದ್ದರಿಂದ ಪಕ್ಷದ ಪ್ರಸ್ತಾವನೆಯನ್ನು ನಾನು ತಿರಸ್ಕರಿಸಿದ್ದೆ. ಆದರೆ ಈ ಬಾರಿ ರಾಜ್ಯದ ರಾಜಕಾರಣವನ್ನು ಗಮನದಲ್ಲಿರಿಸಿಕೊಂಡು ನಾವು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಾಗುತ್ತದೆ. ಹೀಗಾಗಿ ಕಮಲೇಶ್‌ ಅವರನ್ನು ಕಣಕ್ಕಿಳಿಸಲು ಒಪ್ಪಿದೆ' ಎಂದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries