ಕಾಸರಗೋಡು: ಕೇರಳ ರಾಜ್ಯ ಮಕ್ಕಳ ಕಲ್ಯಾಣ ಸಮಿತಿಯ ನಿರ್ದೇಶನದಂತೆ ಕಾಸರಗೋಡು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಫಸ್ಟ್ ರ್ಯಾಂಕ್ ಕಾಸರಗೋಡಿನ ಸಹಯೋಗದೊಂದಿಗೆ "ಸ್ಕೋಪೆÇೀಸ್ 2024" ವೃತ್ತಿ ಮಾರ್ಗದರ್ಶನ ತರಗತಿಯನ್ನು ಆಯೋಜಿಸಿತ್ತು.
ಕಾಸರಗೋಡು ನಗರಸಭಾ ಸಭಾಭವನದಲ್ಲಿ ನಡೆದ ಕಾರ್ಯಕ್ರಮವನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಜಿಲ್ಲಾಧಿಕಾರಿ ಇನ್ಬಾಶೇಖರ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಅಬ್ಬಾಸ್ ಬೇಗಂ ಮುಖ್ಯ ಅತಿಥಿಯಾಗಿದ್ದರು. ಖ್ಯಾತ ವೃತ್ತಿ ಸಲಹೆಗಾರ ಡಾ.ಪಿ.ಆರ್.ವೆಂಕಟರಾಮನ್ ತರಗತಿ ತೆಗೆದುಕೊಂಡರು. ಮಕ್ಕಳ ಕಲ್ಯಾಣ ಸಮಿತಿಯ ರಾಜ್ಯ ಕಾರ್ಯಕಾರಿ ಸದಸ್ಯ ಓ.ಎಂ.ಬಾಲಕೃಷ್ಣನ್, ಪೋಕ್ಸೋ ಪ್ರಾಸಿಕ್ಯೂಟರ್ ನ್ಯಾಯವಾದಿ ಪ್ರಿಯಾ ಎ.ಕೆ, ಜಯನ್ ಕಾರಡ್ಕ, ಶರತ್ ಕುಮಾರ್ ಪೆರುಂಬಳ, ಎಂ.ವಿ.ನಾರಾಯಣನ್ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಟಿ.ಎಂ.ಎ.ಕರೀಂ ಸ್ವಾಗತಿಸಿ,ಸಿ.ವಿ.ಗಿರೀಶನ್ ವಂದಿಸಿದರು.