HEALTH TIPS

'ಭಾರತ' vs 'ಇಂಡಿಯಾ': ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಹೇಳಿದ್ದೇನು?

          ವದೆಹಲಿ: ಸಂವಿಧಾನದಲ್ಲಿ 'ಭಾರತ' ಮತ್ತು 'ಇಂಡಿಯಾ' ಪದಗಳನ್ನು ಹೇಗೆ ಬಳಸಲಾಗಿದೆಯೋ ಅದೇ ರೀತಿ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿಯೂ ಆಯಾ ಸಂದರ್ಭಕ್ಕನುಗುಣವಾಗಿ ಈ ಪದಗಳನ್ನು ಬಳಸಲಾಗಿದೆ ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ತರಬೇತಿ ಮಂಡಳಿಯ(ಎನ್‌ಸಿಇಆರ್‌ಟಿ) ನಿರ್ದೇಶಕ ದಿನೇಶ್ ಪ್ರಸಾದ್ ಸಕ್ಲಾನಿ ಸ್ಪಷ್ಟಪಡಿಸಿದರು.

          ಪಿಟಿಐ ಪ್ರಧಾನ ಕಚೇರಿಯಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, 'ಭಾರತ' ಮತ್ತು 'ಇಂಡಿಯಾ' ಪದ ಬಳಕೆ ಕುರಿತಂತೆ ಚರ್ಚೆ ತರ್ಕಹೀನ ಎಂದರು.

            'ಸಂವಿಧಾನ ಏನು ಹೇಳುತ್ತದೆ ಎಂಬುದನ್ನು ಎತ್ತಿ ಹಿಡಿಯುವುದು ನಮ್ಮ ಕೆಲಸ. ಸಂದರ್ಭಕ್ಕನುಗುಣವಾಗಿ ಈ ಪದಗಳನ್ನು ಬದಲಾಯಿಸಿಕೊಳ್ಳಬಹುದಾಗಿದೆ. ಭಾರತ ಅಥವಾ ಇಂಡಿಯಾ ಪದಗಳನ್ನು ಬಳಸುವುದರಲ್ಲಿ ತೊಂದರೆ ಏನಿದೆ? ಈ ಚರ್ಚೆಯಲ್ಲಿ ನಾವಿಲ್ಲ. ಎಲ್ಲಿ ಯಾವುದು ಹೊಂದುತ್ತದೆಯೋ ಆ ಪದವನ್ನೇ ಬಳಸಲಾಗಿದೆ. ಮಂಡಳಿಗೆ ಇದರ ಬಗ್ಗೆ ಯಾವ ಆಕ್ಷೇಪವೂ ಇಲ್ಲ' ಎಂದು ಹೇಳಿದರು.

             'ಈಗಾಗಲೇ ಈ ಎರಡು ಪದಗಳನ್ನು ಪಠ್ಯಪುಸ್ತಕದಲ್ಲಿ ಬಳಸಿದ್ದೇವೆ. ಹೊಸ ಪಠ್ಯದಲ್ಲಿಯೂ ಇದು ಮುಂದುವರಿಯಲಿದೆ' ಎಂದರು.

            ಕಳೆದ ವರ್ಷ 1ರಿಂದ 12ನೇ ತರಗತಿವರೆಗಿನ ಎಲ್ಲ ಪಠ್ಯಪುಸ್ತಕಗಳಲ್ಲಿ 'ಇಂಡಿಯಾ' ಎಂಬ ಹೆಸರಿನ ಬದಲು 'ಭಾರತ' ಎಂಬ ಹೆಸರನ್ನು ಬಳಸಬೇಕು ಎಂದು ಎನ್‌ಸಿಇಆರ್‌ಟಿಯು ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದಂತೆ ರಚಿಸಿದ್ದ ಉನ್ನತಮಟ್ಟದ ಸಮಿತಿ ಶಿಫಾರಸು ಮಾಡಿತ್ತು.

ದೇಶದಾದ್ಯಂತ ಇದು ವ್ಯಾಪಕ ಚರ್ಚೆ ಹುಟ್ಟುಹಾಕಿತ್ತು.

                ಅಲ್ಲದೇ ಜಿ20 ಶೃಂಗಕ್ಕೆ ಸಂಬಂಧಿಸಿದ ಆಹ್ವಾನ ಪತ್ರಿಕೆಗಳಲ್ಲಿ 'ಪ್ರೆಸಿಡೆಂಟ್ ಆಫ್‌ ಇಂಡಿಯಾ' ಬದಲು 'ಪ್ರೆಸಿಡೆಂಟ್ ಆಫ್ ಭಾರತ್' ಎಂದು ಕೇಂದ್ರ ಸರ್ಕಾರವು ನಮೂದಿಸಿತ್ತು. ನಂತರ, ಜಿ20 ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಸನದ ಎದುರಿನ ನಾಮಫಲಕದಲ್ಲಿ 'ಇಂಡಿಯಾ' ಬದಲು 'ಭಾರತ' ಎಂದು ಬರೆಯದಿದ್ದನ್ನು ಇಲ್ಲಿ ಸ್ಮರಿಸಬೇಕು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries