ಕಾಸರಗೋಡು: ಆಂಧ್ರಪ್ರದೇಶದಿAದ ತಮಿಳ್ನಾಡು ಮೂಲಕ ಕೇರಳಕ್ಕೆ ಗಾಂಜಾ ಸಾಗಿಸುತ್ತಿದ್ದ ಕಾಸರಗೋಡಿನ ಇಬ್ಬರನ್ನು ತಮಿಳ್ನಾಡು ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಪೆರಿಯ ಮೂನಾಂಕಡವು ನಿವಾಸಿ ಆಸಿಫ್ ಹಾಗೂ ಪಾಣತ್ತೂರು ನಿವಾಸಿ ಉದಯಕುಮಾರ್ ಬಂಧಿತರು. ಇವರಿಂದ ೨೩೨ಕಿ,ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಆಂಧ್ರಪ್ರದೇಶದಿAದ ಪಿಕ್ಅಪ್ ವಾಹನದಲ್ಲಿ ೧೧೬ಪ್ಯಾಕೆಟ್ಗಳಲ್ಲಾಗಿ ಗಾಂಜಾ ಸಾಗಿಸುತ್ತಿದ್ದಾಗ ತಮಿಳ್ನಾಡಿನ ವಇಲ್ಲುಪುರಂ ತಿಂಡಿವನ ಸನಿಹ ಕಾರ್ಯಾಚರಣೆ ನಡೆಸಲಾಗಿದೆ. ಆಂಧ್ರದಿAದ ಕೇರಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಗಾಂಜಾ ಪೂರೈಕೆಯಾಗುತ್ತಿದ್ದು, ತಮಿಳ್ನಾಡಿನಿಂದ ಇಡುಕ್ಕಿ ಹಾದಿಯಾಗಿ ಸಾಗಾಟ ನಡೆಯುತ್ತದೆ. ಗಾಂಜಾ ಸಾಗಾಟಕ್ಕೆ ಬಳಸಿದ್ದ ಪಿಕ್ಅಪ್ ವಾಹನ ವಶಪಡಿಸಿಕೊಂಡಿದ್ದಾರೆ.