ಕುಂಬಳೆ: ತಲಪಾಡಿ-ಕಾಸರಗೋಡು-ಧರ್ಮತ್ತಡ್ಕ-ಕಂಬಾರು ರಸ್ತೆಯಲ್ಲಿ ಸರ್ವೀಸ್ ನಡೆಸುವ ಬಸ್ಸು ಮಾಲೀಕರು ಹಾಗೂ ಸಿಬಂದಿಗಳು ಕಳೆದ ಒಂದು ವರ್ಷದಿಂದ ಬಸ್ಸು ಕಾರ್ಮಿಕರಿಗೆ ನೆರವಾಗುತ್ತಿದ್ದಾರೆ. ಸಹಾಯ ಅಗತ್ಯವಿರುವ ಬಸ್ಸು ಕಾರ್ಮಿಕರಿಗೆ ಇವರು ಧನಸಂಗ್ರಹ ಮಾಡಿ ಆರ್ಥಿಕ ನೆರವು ನೀಡುತ್ತಿದ್ದಾರೆ. ಈಗಾಗಲೇ ಐವರು ಬಸ್ಸು ಕಾರ್ಮಿಕರಿಗೆ ಸಹಾಯ ವಿತರಿಸಲಾಗಿದೆ.
ಇದರ ಅಂಗವಾಗಿ ಅನಾರೋಗ್ಯದಿಂದ ಬಳಲುತ್ತಿರುವ ಕುಂಜತ್ತೂರು ಮಾಡದ ಬಸ್ಸು ಚಾಲಕ ಆದರ್ಶ್ ಅವರಿಗೆ ಭಾನುವಾರ ಧನಸಹಾಯ ಹಸ್ತಾಂತರಿಸಲಾಯಿತು.