ಕಾಸರಗೋಡು: ಮುಂಬೈಯ ಸಂಸ್ಥೆಯೊAದರಲ್ಲಿ ಉದ್ಯೋಗದ ಭರವಸೆ ನೀಡಿ, ೨೮ಲಕ್ಷ ರೂ. ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬAಧಿಸಿ ಮುಂಬೈನ ನಾಲ್ವರ ವಿರುದ್ಧ ಚೀಮೇನಿ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಮುಂಬೈ ನಿವಾಸಿಗಳಾದ ಸುಶಾಂತ್ ಮಲಿಕ್, ಸ್ನೇಹಾ, ಕೃತ್ತಿಕಾ ಯಾದವ್ ಹಾಗೂ ದೇವ್ ಎಮಬವರಿಗೆ ಈ ಕೇಸು. ಕಯ್ಯೂರು ಕ್ಲಾಯಿಕ್ಕೋಡ್ ನಿವಾಸಿ ಎಸ್.ವಿ ವಸಂತರಾಜ್ ಎಂಬವರ ದೂರಿನ ಮೇರೆಗೆ ಈ ಕೇಸು ದಾಖಲಾಗಿದೆ. ಮುಂಬೈನ ಕಂಪೆನಿಯೊAದರಲ್ಲಿ ಕೆಲಸ ದೊರಕಿಸಿಕೊಡುವುದಾಗಿ ತಿಳಿಸಿ, ೨೮, ೩೮,೭೧೩ರೂ. ಮೊತ್ತವನ್ನು ಜೂ. ೧೫ರಿಂದ ೨೪ರ ಕಾಲಾವಧಿಯೊಳಗೆ ಗೂಗಲ್ ಪೇ ಹಾಗೂ ಬ್ಯಾಂಕ್ ಖಾತೆ ಮೂಲಕ ಪಡೆದು ವಂಚಿಸಿರುವುದಾಗಿ ರಿನಲ್ಲಿ ತಿಳಿಸಿದ್ದರು.