HEALTH TIPS

100 ಕೋಟಿ ಭೂ ವಂಚನೆ; ತಲೆಮರೆಸಿಕೊಂಡಿದ್ದ ತಮಿಳುನಾಡಿನ ಮಾಜಿ ಸಚಿವ ಎಂ. ಆರ್ ವಿಜಯಭಾಸ್ಕರ್ ತ್ರಿಶೂರ್ ನಲ್ಲಿ ಬಂಧನ

                 ತ್ರಿಶೂರ್: 100 ಕೋಟಿ ಭೂ ಹಗರಣ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ತಮಿಳುನಾಡಿನ ಮಾಜಿ ಸಚಿವರನ್ನು ತ್ರಿಶೂರ್ ನಲ್ಲಿ ಬಂಧಿಸಲಾಗಿದೆ.

              ಅಣ್ಣಾ ಡಿಎಂಕೆ ಸಚಿವ ಎಂ. ಆರ್ ವಿಜಯಭಾಸ್ಕರ್ ಬಂಧಿತರು. ತಮಿಳುನಾಡು ಸಿಬಿ-ಸಿಐಡಿ ತಂಡವು ಪೀಚೆ ವಿಲಂಗನ್ನೂರಿನ ಅವರ ಬಾಡಿಗೆ ಮನೆಯಿಂದ ಕಸ್ಟಡಿಗೆ ತೆಗೆದುಕೊಂಡಿದೆ.

             ಅಣ್ಣಾ ಡಿಎಂಕೆ ಹಿರಿಯ ನಾಯಕ ವಿಜಯ ಭಾಸ್ಕರ್ ಅವರು ಹಿಂದಿನ ಎಡಪ್ಪಾಡಿ ಪಳನಿಸ್ವಾಮಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದರು. ವಿಜಯಭಾಸ್ಕರ್ ಅವರನ್ನು ಪೀಚೆ ಠಾಣೆಗೆ ಕರೆದೊಯ್ದು ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ತಮಿಳುನಾಡಿಗೆ ಕರೆದೊಯ್ಯಲಾಯಿತು

          ಕರೂರಿನ ಉದ್ಯಮಿ ಪ್ರಕಾಶ್ ಅವರಿಗೆ ಬೆದರಿಕೆ ಹಾಕಿ ಆಸ್ತಿ ಕಬಳಿಸಲು ಯತ್ನಿಸಿದ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ. 100 ಕೋಟಿ ಮೌಲ್ಯದ 22 ಎಕರೆಗೂ ಹೆಚ್ಚು ಭೂಮಿಯನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಕೆ ಮಾಡಲಾಗಿದೆ ಎಂದು ತೋರಿಸಿ ಮೇ 11ರಂದು ದೂರು ದಾಖಲಾಗಿತ್ತು. ನಂತರ ಕರೂರು ಪಟ್ಟಣ ಠಾಣೆಯಲ್ಲಿ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದೆ.

           ಈ ಪ್ರಕರಣದಲ್ಲಿ ವಿಜಯ ಭಾಸ್ಕರ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕರೂರು ಜಿಲ್ಲಾ ಸತ್ರ ನ್ಯಾಯಾಲಯ ತಿರಸ್ಕರಿಸಿದೆ. ಇದಾದ ಬಳಿಕ ಮಾಜಿ ಸಚಿವರು ತಮ್ಮ ನಿವಾಸದಿಂದ ನಾಪತ್ತೆಯಾಗಿದ್ದಾರೆ. ವಿಜಯ ಭಾಸ್ಕರ್ ಅವರನ್ನು ಬಂಧಿಸಲು ತನಿಖಾ ತಂಡ ಉತ್ತರ ಭಾರತಕ್ಕೆ ಭೇಟಿ ನೀಡಿತ್ತು. ಕಳೆದ ವಾರ ವಿಜಯಭಾಸ್ಕರ್ ಅವರ ಕರೂರ್ ಮತ್ತು ಚೆನ್ನೈ ನಿವಾಸಗಳ ಮೇಲೂ ದಾಳಿ ನಡೆಸಲಾಗಿತ್ತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries