HEALTH TIPS

ಗುರುವಾಯೂರಿನ ಹೆಚ್ಚಿನ ಹೋಟೆಲ್‍ಗಳಲ್ಲಿ ಸ್ವಚ್ಛತೆಯ ಕೊರತೆ: 11 ತಿನಿಸು ಅಂಗಡಿಗಳನ್ನು ಮುಚ್ಚಲು ಸೂಚನೆ

                 ಗುರುವಾಯೂರು: ಒಂದು ವರ್ಷದಲ್ಲಿ ಆರು ಕೋಟಿಗೂ ಹೆಚ್ಚು ಶ್ರೀ ಗುರುವಾಯೂರಪ್ಪ ಭಕ್ತರು ಭೇಟಿ ನೀಡುವ ಗುರುವಾಯೂರು ಪುರಸಭಾ ವ್ಯಾಪ್ತಿಯಲ್ಲಿ ಬಹುತೇಕ ಹೋಟೆಲ್‍ಗಳು ಮತ್ತು ಗೂಡಂಗಡಿಗಳು ಸಮರ್ಪಕ ನೈರ್ಮಲ್ಯವಿಲ್ಲದೆ ಕಾರ್ಯನಿರ್ವಹಿಸುತ್ತಿರುವುದು ಆಹಾರ ಸುರಕ್ಷತಾ ಇಲಾಖೆ ಪತ್ತೆ ಹಚ್ಚಿದೆ.

            ಗುರುವಾಯೂರಿನಲ್ಲಿ ಸಾಕಷ್ಟು ಗುಣಮಟ್ಟ ಅಥವಾ ಪ್ರಮಾಣವಿಲ್ಲದೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಹೋಟೆಲ್‍ಗಳು ಮತ್ತು ಗೂಡಂಗಡಿಗಳು ಹೆಚ್ಚುತ್ತಿರುವುದನ್ನು ಆಹಾರ ಸುರಕ್ಷತಾ ಇಲಾಖೆ ಪತ್ತೆ ಮಾಡಿದೆ.

                 11 ಆಹಾರ ಮಳಿಗೆಗಳನ್ನು ಮುಚ್ಚುವಂತೆ ಆಹಾರ ಸುರಕ್ಷತಾ ಇಲಾಖೆ ನೋಟಿಸ್ ನೀಡಿದೆ. ಶುಚಿತ್ವ ಕಾಪಾಡದೆ, ಸಾಕಷ್ಟು ದಾಖಲೆಗಳಿಲ್ಲದೆ ಕಾರ್ಯಾಚರಿಸುತ್ತಿರುವ ಆಹಾರ ಮಳಿಗೆಗಳು ಸೇರಿದಂತೆ ಹನ್ನೊಂದು ಆಹಾರ ಮಳಿಗೆಗಳನ್ನು ಮುಚ್ಚುವಂತೆ ಆಹಾರ ಸುರಕ್ಷತಾ ಇಲಾಖೆ ಸೂಚನೆ ನೀಡಿದೆ. ಜಿಲ್ಲೆಯ 247 ಆಹಾರ ಮಳಿಗೆಗಳ ಮೇಲೆ ದಾಳಿ ನಡೆಸಿ ಆಹಾರ ಸುರಕ್ಷತಾ ಇಲಾಖೆ ಸೂಚನೆ ನೀಡಿದೆ. 65 ಹೋಟೆಲ್‍ಗಳ ಕಾರ್ಯಕ್ಷಮತೆ ಉತ್ತಮವಾಗಿಲ್ಲ ಎಮದು ಪತ್ತೆಮಾಡಲಾಗಿದೆ.

            ಅಡುಗೆ ಮನೆಗಳಲ್ಲಿ ಅಡುಗೆ ಮಾಡಿ ಬಡಿಸುವವರಿಗೆ ರೋಗಗಳು, ಸ್ವಚ್ಛತೆಯ ಕೊರತೆ ಕಂಡು ಬಂದಿರುವುದು ಗೊತ್ತಾಗಿದೆ. ಹಲವರ ಬಳಿ ವೈದ್ಯಕೀಯ ಫಿಟ್ನೆಸ್ ಪ್ರಮಾಣ ಪತ್ರವೂ ಇಲ್ಲ, ಕುಡಿಯುವ ನೀರು ಗುಣಮಟ್ಟದಿಂದ ಕೂಡಿಲ್ಲ ಎಂದು ಆಹಾರ ಸುರಕ್ಷತಾ ಇಲಾಖೆ ಪತ್ತೆ ಹಚ್ಚಿದೆ. 65 ಹೋಟೆಲ್‍ಗಳಿಗೆ ತಮ್ಮ ಕಾರ್ಯಾಚರಣೆಯನ್ನು ಸುಧಾರಿಸಲು ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries