ತಿರುವನಂತಪುರಂ: ರಾಜ್ಯದಲ್ಲಿ 11 ಸಾರ್ವಜನಿಕ ವಲಯದ ಸಂಸ್ಥೆಗಳು ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿವೆ ಎಂದು ಕೈಗಾರಿಕಾ ಸಚಿವ ಪಿ.ರಾಜೀವ್ ಹೇಳಿದ್ದಾರೆ.
ರಾಜ್ಯ ಜವಳಿ ನಿಗಮದ ಕೊಟ್ಟಾಯಂ ಘಟಕ ಸೇರಿದಂತೆ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ವೇತನ ಪಾವತಿಯೂ ಕಷ್ಟವಾಗಿದೆ ಎಂದು ವಿಧಾನಸಭೆಯಲ್ಲಿ ತಿಳಿಸಿದರು.
ಮಾರುಕಟ್ಟೆಯಲ್ಲಿನ ತೀವ್ರ ಪೈಪೋಟಿ ಹಾಗೂ ಉತ್ಪನ್ನಗಳ ಬೆಲೆ ಸಿಗುವಲ್ಲಿ ವಿಳಂಬವಾಗುತ್ತಿರುವುದು ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಬಿಕ್ಕಟ್ಟಿಗೆ ಸಿಲುಕಿಸಿದೆ. ಕೈಮಗ್ಗ ರಫ್ತು ಕೂಡ ಗಣನೀಯವಾಗಿ ಕುಸಿದಿದೆ. ಶಾಲಾ ಸಮವಸ್ತ್ರ ತಯಾರಿಕೆಗೆ ಕೈಮಗ್ಗ ಗಿಲ್ಡ್ಗಳಿಗೆ 18 ಕೋಟಿ ಮತ್ತು ಸ್ಪಿನ್ನಿಂಗ್ ಮಿಲ್ಗಳಿಗೆ 5.64 ಕೋಟಿ ಬಾಕಿ ಇದೆ.
ರಾಜ್ಯ ಜವಳಿ ನಿಗಮ ಎಡರಿಕೋಡ್, ಕೊಟ್ಟಾಯಂ ಘಟಕಗಳು, ಸೀತಾರಾಮ್ ಟೆಕ್ಸ್ಟೈಲ್ಸ್, ತ್ರಿಶೂರ್ ಕೋ-ಆಪರೇಟಿವ್ ಸ್ಪಿನ್ನಿಂಗ್ ಮಿಲ್, ಮಲಬಾರ್ ಕೋ-ಆಪರೇಟಿವ್ ಸ್ಪಿನ್ನಿಂಗ್ ಮಿಲ್, ಆಟೋ ಕ್ಯಾಸ್ಟ್, ಟ್ರಾವಂಕೂರ್ ಸಿಮೆಂಟ್ಸ್, ಬಾಂಬು ಕಾಪೆರ್Çರೇಷನ್, ಟ್ರಾಕೊ ಕೇಬಲ್ ಕಂಪನಿ, ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮ ಮತ್ತು ಕೇರಳ ಆಟೋಮೊಬೈಲ್ಸ್ ಬಿಕ್ಕಟ್ಟಿನಲ್ಲಿರುವ ಪಿಎಸ್ಯುಗಳಾಗಿವೆ.