HEALTH TIPS

ಸ್ವಾಮಿ ವಿವೇಕಾನಂದರ 122ನೇ ಪುಣ್ಯತಿಥಿ: ಮೋದಿ, ಮಮತಾ ನಮನ

         ವದೆಹಲಿ: ಸ್ವಾಮಿ ವಿವೇಕಾನಂದರ 122ನೇ ಪುಣ್ಯತಿಥಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೌರವ ನಮನ ಸಲ್ಲಿಸಿದ್ದಾರೆ.

             ದೇಶದಲ್ಲಿ ಸಮೃದ್ಧ ಮತ್ತು ಪ್ರಗತಿಪರ ಸಮಾಜ ನಿರ್ಮಿಸುವ ತಮ್ಮ ಬದ್ಧತೆಯನ್ನು ಪುನರುಚ್ಛರಿಸುವುದಾಗಿ ಅವರು ಹೇಳಿದ್ದಾರೆ.

             ವಿವೇಕಾನಂದರ ಪುಣ್ಯತಿಥಿ ಹಿನ್ನೆಲೆಯಲ್ಲಿ ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ. ಅವರ ಬೋಧನೆಗಳು ಲಕ್ಷಾಂತರ ಜನರಿಗೆ ಶಕ್ತಿಯನ್ನು ನೀಡಿವೆ. ಅವರ ಜಾಣ್ಮೆ ಮತ್ತು ನಿರಂತರ ಜ್ಞಾನದ ಅನ್ವೇಷಣೆ ಕೂಡ ಬಹಳ ಪ್ರೇರಕವಾಗಿದೆ ಎಂದು ಎಕ್ಸ್‌ ಪೋಸ್ಟ್‌ನಲ್ಲಿ ಮೋದಿ ತಿಳಿಸಿದ್ದಾರೆ.


             1902ರ ಜುಲೈ 04ರಂದು ಸ್ವಾಮಿ ವಿವೇಕಾನಂದ ನಿಧನರಾಗಿದ್ದರು. ವೇದಾಂತ ತತ್ವಶಾಸ್ತ್ರವನ್ನು ಪಾಶ್ಚಿಮಾತ್ಯ ದೆಶಗಳಲ್ಲಿ ಪ್ರಚಾರ ಮಾಡಿದ ಅವರು, ಬಡವರ ಸೇವೆಗಾಗಿ ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದ್ದರು.

               ವಿವೇಕಾನಂದರು ಒಬ್ಬ ದೊಡ್ಡ ದೇಶಭಕ್ತರಾಗಿದ್ದು, ನಮ್ಮ ಧರ್ಮ ಮತ್ತು ದೇಶವನ್ನು ಇಬ್ಭಾಗಿಸದೆ ಪ್ರೀತಿಸುವುದನ್ನು ಬೋಧಿಸಿದ್ದರು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries