HEALTH TIPS

ಯಕ್ಷಗುರು ಜಯರಾಮ ಪಾಟಾಳಿ ಪಡುಮಲೆ ಸುವರ್ಣ ಸಂಭ್ರಮ: ಜು.14ರಂದು ಬದಿಯಡ್ಕದಲ್ಲಿ ಸಮಾಲೋಚನಾ ಸಭೆ

            ಬದಿಯಡ್ಕ: ಯಕ್ಷಗಾನದ ಗುರು, ಧಾರ್ಮಿಕ, ಸಾಮಾಜಿಕ ಜಾನಪದ ರಂಗದ ಸಾಧಕ ಜಯರಾಮ ಪಾಟಾಳಿ ಪಡುಮಲೆ ಇವರ ಸಾರ್ಥಕ ಬದುಕಿನ 50 ವರ್ಷದ ಸಂದರ್ಭದಲ್ಲಿ `ಜಯರಾಮ ಸುವರ್ಣ ಸಂಭ್ರಮ' ಕಾರ್ಯಕ್ರಮ ಅಕ್ಟೋಬರ್ ತಿಂಗಳಿನಲ್ಲಿ ಜರಗಲಿರುವುದು. ಅಭಿನಂದನಾ ಸಮಿತಿಯ ರೂಪೀಕರಣದ ಕುರಿತು ಸಮಾಲೋಚನಾ ಸಭೆ ಜು.14 ರಂದು  ಭಾನುವಾರ ಮಧ್ಯಾಹ್ನ 2 ರಿಂದ ಬದಿಯಡ್ಕ  ಶ್ರೀಗುರುಸದನದಲ್ಲಿ ಜರಗಲಿರುವುದು. ಇದೇ ಸಂದಭರ್Àದಲ್ಲಿ ಕಾರ್ಯಕ್ರಮದ ರೂಪುರೇಷೆ ಹಾಗೂ ಇನ್ನಿತರ ವಿಚಾರಗಳನ್ನು ಚರ್ಚಿಸಲಾಗುವುದು. 

             ಯಕ್ಷಗಾನ ರಂಗದಲ್ಲಿ ಸಾಧನೆಗೈದಿರುವ ಜಯರಾಮ ಪಾಟಾಳಿ ಪಡುಮಲೆ ಅವರು ನಾಡಿನಾದ್ಯಂತ ಅನೇಕ ಶಿಷ್ಯಂದಿರನ್ನು, ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಮಾಲೋಚನಾ ಸಭೆಯಲ್ಲಿ ಅವರ ಹಿತೈಷಿಗಳು, ಶಿಷ್ಯಂದಿರು, ಅಭಿಮಾನಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡು ಜಯರಾಮ ಸುವರ್ಣ ಸಂಭ್ರಮ ಕಾರ್ಯಕ್ರಮದ ಯಶಸ್ವಿಗಾಗಿ ಕೈಜೋಡಿಸಬೇಕೆಂದು ಸಂಬಂಧಪಟ್ಟವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries