ಮಂಜೇಶ್ವರ: ಶ್ರೀ ಗುರುನರಸಿಂಹ ಯಕ್ಷಬಳಗ ಮೀಯಪದವು ಯಕ್ಷಗಾನ ತಂಡದ ವಾರ್ಷಿಕ ಕಾರ್ಯಕ್ರಮ ಯಕ್ಷಚಿಗುರು- 2024 ಆ.10 ರಂದು ಶನಿವಾರ ಶ್ರೀ ಮಹಾವಿಷ್ಣು ದೇವಸ್ಥಾನ ದೇಲಂತೊಟ್ಟು ಬಜೆ ಕ್ಷೇತ್ರದಲ್ಲಿ ಜರಗಲಿದೆ. ಆ ಬಗೆಗಿನ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕ್ಷೇತ್ರ ಅರ್ಚಕ ಬಾಲಸುಬ್ರಹ್ಮಣ್ಯ ಭಟ್ ಬಿಡುಗಡೆಗೊಳಿಸಿದರು. ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಶ್ರೀಧರ ರಾವ್ ಆರ್.ಎಂ., ವೇದಮೂರ್ತಿ ಗಣೇಶ ನಾವಡ, ಪುಷ್ಪರಾಜ ರೈ ತಲೇಕಳ, ರಾಜಾರಾಮ ರಾವ್ ಮೀಯಪದವು, ಪಾರ್ಥಸಾರಥಿ ಇಂಜಿನಿಯರ್, ಯೋಗೀಶ ರಾವ್ ಚಿಗುರುಪಾದೆ, ವೇಣುಗೋಪಾಲ ಮಜಿಬೈಲು ಮುಂತಾದ ಗಣ್ಯರು ಉಪಸ್ಥಿತರಿದ್ದರು.