ತಿರುವನಂತಪುರ: ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ನಿಧಿಯ ಒಂದು ಕಂತಿನ ಪಿಂಚಣಿ ವಿತರಣೆಯನ್ನು ಬುಧವಾರ (ಜುಲೈ 24) ಆರಂಭಿಸಲಾಗುವುದು ಎಂದು ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಘೋಷಿಸಿದ್ದಾರೆ. ಫಲಾನುಭವಿಗಳಿಗೆ ತಲಾ 1600 ರೂ. ನಂತೆ ವಿತರಿಸಲಾಗುತ್ತಿದ್ದು, ಇದಕ್ಕಾಗಿ 900 ಕೋಟಿ ಮೀಸಲಿಡಲಾಗಿದೆ.
ಎಂದಿನಂತೆ ಬ್ಯಾಂಕ್ ಖಾತೆ ಸಂಖ್ಯೆ ನೀಡಿದವರಿಗೆ ತಮ್ಮ ಖಾತೆಯ ಮೂಲಕ ಹಾಗೂ ಇತರರಿಗೆ ಸಹಕಾರಿ ಸಂಘಗಳ ಮೂಲಕ ಪಿಂಚಣಿ ನೇರವಾಗಿ ಮನೆಗೆ ತಲುಪಿಸಲಾಗುವುದು. ಪಿಂಚಣಿ ಸ್ಥಗಿತಗೊಳಿಸಿದ್ದರಿಂದ ಭಾರೀ ಪ್ರತಿಭಟನೆ, ಆಕ್ಷೇಪ ವ್ಯಕ್ತವಾಗಿದ್ದು, ಆಯಾ ತಿಂಗಳಲ್ಲೇ ಪಿಂಚಣಿ ವಿತರಿಸಲು ಕ್ರಮ ಕೈಗೊಳ್ಳುವುದಾಗಿ ಈ ಬಾರಿಯ ಬಜೆಟ್ನಲ್ಲಿ ಪ್ರಕಟಿಸಲಾಗಿತ್ತು.