HEALTH TIPS

ಸಹಕಾರಿ ಬ್ಯಾಂಕ್‍ಗಳ ಒಕ್ಕೂಟದಿಂದ ಕರುವನ್ನೂರು ಬ್ಯಾಂಕ್‍ಗೆ 8 ಕೋಟಿ ರೂ. ನೀಡಲು ತೀರ್ಮಾನ

              ತಿರುವನಂತಪುರ: ಸಹಕಾರಿ ಸಚಿವ ವಿ.ಎನ್.ವಾಸವನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಾಥಮಿಕ ಸಹಕಾರಿ ಬ್ಯಾಂಕ್ ಗಳ ಒಕ್ಕೂಟದಿಂದ ಕರುವನ್ನೂರ್ ಸೇವಾ ಸಹಕಾರಿ ಬ್ಯಾಂಕ್ ಗೆ 8 ಕೋಟಿ ರೂ.ನೀಡಲು ನಿರ್ಧಋಇಸಲಾಗಿದೆ.

               ಇದಲ್ಲದೇ ಬ್ಯಾಂಕ್‍ನ ವಿಶೇಷ ಪ್ಯಾಕೇಜ್‍ನ ಭಾಗವಾಗಿ ಠೇವಣಿ ಖಾತರಿ ಮಂಡಳಿಯಿಂದ ಹೆಚ್ಚಿನ ಮೊತ್ತವನ್ನು ಮಂಜೂರು ಮಾಡಲಾಗುವುದು. 10 ಲಕ್ಷಕ್ಕಿಂತ ಹೆಚ್ಚಿನ ಸಾಲ ಮನ್ನಾ ಮಾಡಲು ಉನ್ನತ ಮಟ್ಟದ ಸಮಿತಿ ರಚಿಸಲು ಸಭೆಯಲ್ಲಿ ಸೂಚಿಸಲಾಯಿತು. ಬ್ಯಾಂಕ್‍ನಲ್ಲಿ ವಸೂಲಾತಿ ಪ್ರಕ್ರಿಯೆಯನ್ನು ವೇಗಗೊಳಿಸಲು ಇನ್ನೂ ಇಬ್ಬರು ಮಾರಾಟ ಅಧಿಕಾರಿಗಳನ್ನು ನಿಯೋಜಿಸಲು ಮತ್ತು ಕೇರಳ ಬ್ಯಾಂಕ್‍ನ ವಸೂಲಾತಿ ಕಾರ್ಯಪಡೆಯ ಸೇವೆಯನ್ನು ಒದಗಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

            ಪ್ರಸ್ತುತ 124.34 ಕೋಟಿ ರೂ.ಗಳನ್ನು ಬ್ಯಾಂಕ್ ಠೇವಣಿದಾರರಿಗೆ ಹಿಂತಿರುಗಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries