ಸಮರಸ ಚಿತ್ರಸುದ್ದಿ: ಉಪ್ಪಳ: ಬ್ಯಾಂಕ್ ಆಫ್ ಬರೋಡ ಕಾಂಞಂಗಾಡ್ ಶಾಖಾ ಪ್ರಬಂಧಕ, ಶಾಲಾ ಹಳೆ ವಿದ್ಯಾರ್ಥಿ(1997-98 ರ ಎಸ್ಎಸ್ಎಲ್ಸಿ ಬ್ಯಾಚ್) ಯಾದ ಅಬ್ದುಲ್ ರಹಿಮಾನ್ ಅವರು ಬ್ಯಾಂಕ್ ವತಿಯಿಂದ ಕುರುಡಪದವು ಕುರಿಯ ವಿಠಲ ಶಾಸ್ತ್ರಿ ಪ್ರೌಢ ಶಾಲೆಗೆ ಆಂಪ್ಲಿ ಫೈಯರ್ ಮತ್ತು ಸೌಂಡ್ ಬಾಕ್ಸ್ನ್ನು ಕೊಡುಗೆಯಾಗಿ ನೀಡಿದರು. ಅವರನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಟೀಚರ್ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.