HEALTH TIPS

ನಾರಂಪಾಡಿ: ಬ್ರಹ್ಮಕಲಶೋತ್ಸವ ಸಹಿತ ವಿವಿಧ ಸಮಿತಿ ಸಭೆ

             ಮುಳ್ಳೇರಿಯ: ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ, ಸೇವಾಸಮಿತಿ, ಕಾರ್ಯಕಾರೀ ಸಮಿತಿಯ ಸಭೆ ಶ್ರೀಕ್ಷೇತ್ರದಲ್ಲಿ ಭಾನುವಾರ ಜರಗಿತು. ಬ್ರಹ್ಮ ಕಲಶೋತ್ಸವದ ಸಮಿತಿ ಅಧ್ಯಕ್ಷ ನಿತ್ಯಾನಂದ ಶೆಣೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಒಂದೇ ಮನಸ್ಸಿನಿಂದ ಒಗ್ಗಟ್ಟಿನೊಂದಿಗೆ ಮುಂದುವರಿದಾಗ ನೆನೆದ ಕಾರ್ಯ ಅತಿಶೀಘ್ರದಲ್ಲಿ ಕೈಗೂಡಲಿದೆ. 2025 ಫೆಬ್ರವರಿ 2ನೇ ತಾರೀಕಿನಿಂದ ಫೆಬ್ರವರಿ 10ನೇ ತಾರೀಕಿನವರೆಗೆ ಜರುಗುವ ಬೃಹ್ಮಕಲಶೋತ್ಸವವನ್ನು ಯಶಸ್ವೀಗೊಳಿಸಬೇಕೆಂದು ಕರೆಯಿತ್ತರು.

          ಸಮಿತಿಯ ಉಪಾಧ್ಯಕ್ಷ ತಲೇಕ ಸುಬ್ರಹ್ಮಣ್ಯ ಭಟ್ ಕ್ಷೇತ್ರದಲ್ಲಿ ಇನ್ನು ಆಗಬೇಕಾದ ಜೀಣೋದ್ದಾರ ಕೆಲಸಕಾರ್ಯಗಳ ಬಗ್ಗೆ ವಿವರಿಸಿದರು. ಉಪಾಧ್ಯಕ್ಷ ಮಧುಕರ ರೈ ಕೊರೆಕ್ಕಾನ ಮಾತನಾಡಿದರು. ಕ್ಷೇತ್ರದ ಪವಿತ್ರಪಾಣಿ ಕಿರಣ ಕುಣಿಕುಳ್ಳಾಯರು ಸಲಹೆ ಸೂಚನೆಗಳನ್ನಿತ್ತರು. ಹಿರಿಯರಾದ ಸಂಜೀವ ಶೆಟ್ಟಿ ಮೊಟ್ಟ ಕುಂಜ, ಎಸ್.ಎನ್ ಮಯ್ಯ, ಐತ್ತಪ್ಪ ಮವ್ವಾರು, ಕುಂಞÂರಾಮ ಗೋಸಾಡ, ರವೀಂದ್ರ ರೈ ಗೋಸಾಡ, ಹರೀಶ ನಾರಂಪಾಡಿ, ಗೋಪಾಲಕೃಷ್ಣ ಮುಂಡೋಳುಮೂಲೆ, ತ್ಯಾಂಪಣ್ಣ ಭಂಡಾರಿ, ಸತೀಶ ರೈ, ಮುತ್ತಪ್ಪ ರೈ, ವೆಂಕಟ್ರಮಣ ಭಟ್ ಪೆಲ್ತಾಜೆ, ಬಾಬು ನೆಲ್ಯಡ್ಕ, ದೇವರಾಜ್ ಭಂಡಾರಿ, ಶ್ರೀನಿವಾಸ ಅಮ್ಮಣ್ಣಾಯ ಪಾವೂರು, ಪದ್ಮನಾಭ ಮಣಿಯಾಣಿ, ವಸಂತಿ ಟೀಚರ್, ಕಲಾವತಿ ಟೀಚರ್, ರಾಜೀವಿ, ಉಪ್ಪಂಗಳ ವೆಂಕಟ್ರಮಣ ಭಟ್, ವಸಂತ ಪೊಡಿಪಳ್ಳ, ಸೀತಾರಾಮ ಕುಂಜತ್ತಾಯ ಮಾಸ್ತರ್, ರವಿಶಂಕರ್ ಪುಣಿಂಚಿತ್ತಾಯ ವಾಲ್ತಾಜೆ ಮೊದಲಾದವರು ಚರ್ಚೆಯಲ್ಲಿ ಭಾಗವಹಿಸಿದರು. ವೆಂಕಟ್ರಮಣ ಭಟ್ ಪೆಲ್ತಾಜೆ ಪ್ರಾರ್ಥನೆ ಹಾಡಿದರು. ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಮಾಸ್ತರ್ ನಾರಂಪಾಡಿ ಸ್ವಾಗತಿಸಿ, ಕೃಷ್ಣಮೂರ್ತಿ ನಡುವಂಗಡಿ ವಂದಿಸಿದರು. ಮುಂದಿನ ಸಭೆÉಯನ್ನು ಜು 28 ಭಾನುವಾರ ಮಧ್ಯಾಹ್ನ 2.30ಕ್ಕೆ ನಡೆಸಲು ತೀರ್ಮಾನಿಸಲಾಯಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries