ಮಂಜೇಶ್ವರ: ಮಾಜಿ ಮುಖ್ಯಮಂತ್ರಿ ಊಮನ್ ಚಾಂಡಿ ಅವರ ಪ್ರಥಮ ಸಂಸ್ಮರಣಾ ಸಮಾರಂಭ ವರ್ಕಾಡಿ ಗಾಂಧೀನಗರ ಎ.ಎಚ್ ಪ್ಯಾಲೇಸ್ ಸಭಾಂಗಣದಲ್ಲಿ ಜರುಗಿತು. ಮೀಂಜ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಾಮೋದರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಸ್ದಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಸಮಾರಂಭ ಉದ್ಘಾಟಿಸಿದರು. ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಎ.ಪ್ರಕಾಶ್ ನಾಯ್ಕ್, ಕಂಚಿಲ ಮೊಹಮ್ಮದ್, ಕೆ.ಸದಾಶಿವ, ಎಸ್.ಅಬ್ದುಲ್ ಖಾದರ್ ಹಾಜಿ, ಸಂಕಬೈಲು ಸತೀಶ ಅಡಪ, ಮೊಹಮ್ಮದ್ ಹನೀಫ್ ಎಚ್.ಎ, ಉಮ್ಮರ್ ಕುಂಞ, ವಿನೋದ್ ಕುಮಾರ್.ಪಿ, ಬಿ.ಕೆ ಮೊಹಮ್ಮದ್, ರಜಾಕ್ ಹಾಜಿ, ವಿಕ್ಟರ್ ವೇಗಸ್, ಹಮೀದ್ ಬೋರ್ಕಳ, ಅಹಮದ್ ಮನ್ಸೂರ್, ಕಾಯಿಂಞ ಹಾಜಿ ತಲೇಕಳ, ಉಮ್ಮರ್ ಬೆಜ್ಜ, ಶರ್ಮಿಳಾ ಪಿಂಟೋ, ಜೋಕಿಂ ಮೊಂತೇರೋ, ಶೇಕ್ ಅಬ್ಬಾಸ್, ಫೀಲೋಮಿನ ಮೊಂತೇರೋ, ಶಾಫಿ ತಲೇಕಳ, ಮೊಹಮ್ಮದ್ ಕೆದುಂಬಾಡಿ, ಲತೀಫ್ ಕುಳಬೈಲು, ಖಾಜಾ ಸಾಹೇಬ್, ಸಿದ್ದೀಕ್ ದೈಗೋಳಿ, ಬಿಜು ಸೆಬಾಸ್ಟಿಯನ್, ಮೊಹಮ್ಮದ್ ಬೆಜ್ಜ, ಅಶ್ರಫ್ ಗಾಂಧೀನಗರ, ಪಳ್ಳಿಕುಂಞ ತಲೇಕಳ, ಶಶಿಧರ ನಾಯ್ಕ್, ಅಬ್ದುಲ್ಲ ಟಿ, ಅಬೂಸಾಲಿ, ಹಮೀದ್ ಕಣಿಯೂರು, ಹನೀಫ್ ಕುಮೇರ್, ಅಬೂಬಕ್ಕರ್ ಬಟ್ಯಪದವು ಉಪಸ್ಥೀತರಿದ್ದರು.