HEALTH TIPS

ಅನ್ಯ ರಾಜ್ಯಗಳಿಗೆ ಅಭಿವೃದ್ಧಿ ಯೋಜನೆ ಪ್ರಕಟಿಸಿದ್ದಲ್ಲಿ ತನಗೆ ಅಭ್ಯಂತರವಿಲ್ಲ: ಮುಖ್ಯಮಂತ್ರಿ

             ತಿರುವನಂತಪುರ: ಯಾವುದೇ ರಾಜ್ಯಕ್ಕೆ ಅಗತ್ಯವಾದ ಅಭಿವೃದ್ಧಿ ಯೋಜನೆ ಪ್ರಕಟಿಸಲು ನನ್ನ ಅಭ್ಯಂತರವಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

                 ಅವರು ಕೇಂದ್ರ ಬಜೆಟ್‌ಗೆ ಪ್ರತಿಕ್ರಿಯಿಸಿದರು. ಬಿಹಾರ, ಆಂಧ್ರ ಮತ್ತು ಹಿಮಾಚಲ ಪ್ರದೇಶಗಳಿಗೆ ವಿಶೇಷ ಬಜೆಟ ನೆರವು ಘೋಷಣೆಗೆ ಎಡಪಕ್ಷಗಳ ಇತರ ನಾಯಕರು ಮತ್ತು ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದರೆ ಮುಖ್ಯಮಂತ್ರಿಗಳು ಅನುಕೂಲಕರ ಪ್ರತಿಕ್ರಿಯೆ ನೀಡಿದ್ದಾರೆ.

                ಆದರೆ ಯಾವುದೇ ರಾಜ್ಯವನ್ನು ಕಡೆಗಣಿಸುವುದನ್ನು ಒಪ್ಪಲಾಗದು ಎಂದು ಮುಖ್ಯಮಂತ್ರಿ ಹೇಳಿದರು.

                     ಬಜೆಟ್ ಪ್ರಸ್ತಾವನೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಕೇಂದ್ರದ ಮುಂದೆ ಕೇರಳದ ಬೇಡಿಕೆಗಳನ್ನು ಪುನರುಚ್ಚರಿಸಲು ಸಂಘಟಿತ ಪ್ರಯತ್ನ ಮಾಡಲಾಗುವುದು. ಎಐಐಎಂಎಸ್(ಏಮ್ಸ್) ಸೇರಿದಂತೆ ಕೇರಳದ ದೀರ್ಘಕಾಲೀನ ಅಗತ್ಯಗಳನ್ನು ಪರಿಗಣಿಸಬೇಕು. ಪ್ರಕೃತಿ ವಿಕೋಪ ತಡೆ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೇರಳವನ್ನು ಪರಿಗಣಿಸಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries