HEALTH TIPS

ಹರಿಯಾಣ | ಶಂಭು ಗಡಿ ತೆರೆದಾಗ ದೆಹಲಿಗೆ ದಾಂಗುಡಿ: ಪ್ರತಿಭಟನಾನಿರತ ರೈತರ ಎಚ್ಚರಿಕೆ

            ಚಂಡೀಗಢ: 'ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಾಪಿಸಲಾಗಿರುವ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿದಾಗ ಹರಿಯಾಣದ ಅಂಬಾಲದ ಬಳಿ ಶಂಭು ಗಡಿಯಲ್ಲಿ ಬೀಡುಬಿಟ್ಟಿರುವ ರೈತರು ದೆಹಲಿಯತ್ತ ನುಗ್ಗಲಿದ್ದಾರೆ' ಎಂದು ರೈತ ಮುಖಂಡ ಜಗಜೀತ ಸಿಂಗ್ ಡಲ್ಲೇವಾಲ್ ಮಂಗಳವಾರ ಹೇಳಿದ್ದಾರೆ.

            ಶಂಭು ಗಡಿಯಲ್ಲಿ ಸ್ಥಾಪಿಸಲಾಗಿರುವ ಬ್ಯಾರಿಕೇಡ್‌ಗಳನ್ನು 'ಪ್ರಾಯೋಗಿಕ ಆಧಾರ'ದಲ್ಲಿ ತೆಗೆದುಹಾಕುವಂತೆ ಹರಿಯಾಣ ಸರ್ಕಾರಕ್ಕೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸೂಚಿಸಿದ ಬೆನ್ನಲ್ಲೇ, ರೈತ ಮುಖಂಡ ಜಗಜೀತ ಸಿಂಗ್ ಡಲ್ಲೇವಾಲ್ ಅವರ ಈ ಹೇಳಿಕೆ ಹೊರಬಿದ್ದಿದೆ.

ಫೆಬ್ರುವರಿ 13ರಿಂದ ಶಂಭು ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

               ಹೆದ್ದಾರಿಗಳು ತೆರೆದಾಗ, ದೆಹಲಿಯತ್ತ ತೆರಳಬೇಕು ಎನ್ನುವುದು ನಮ್ಮ ನಿರ್ಧಾರವಾಗಿದೆ. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಖಾತ್ರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡ ಡಲ್ಲೇವಾಲ್ ಹೇಳಿದ್ದಾರೆ.

                 ಮತ್ತೊಂದೆಡೆ, ಹೆದ್ದಾರಿಯನ್ನು ಬ್ಯಾರಿಕೇಡ್‌ಗಳಿಂದ ಮುಕ್ತಗೊಳಿಸಬೇಕು ಎಂಬ ಹೈಕೋರ್ಟ್ ಆದೇಶ ಪ್ರಶ್ನಿಸಿ ಹರಿಯಾಣ ಸರ್ಕಾರವು ಸುಪ್ರೀಂ ಕೋರ್ಟ್ ಮೊರೆಹೋಗಿದೆ. ಒಂದು ವೇಳೆ ಹೆದ್ದಾರಿ ತೆರೆದರೆ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂದು ತನ್ನ ಅರ್ಜಿಯಲ್ಲಿ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries