HEALTH TIPS

ಕೇರಳ ಎನ್‍ಜಿಒ ಸಂಘದ ರಾಜ್ಯ ಸಮ್ಮೇಳನ ಆರಂಭ

               ಕಾಸರಗೋಡು: ಕೇರಳ ಎನ್‍ಜಿಒ ಸಂಘದ ರಾಜ್ಯ ಸಮ್ಮೇಳನ ಕಾಸರಗೋಡು ನಗರಸಭಾಂಗಣದಲ್ಲಿ ವಿಷಯಮಂಡನಾ ಸಮಿತಿ ಸಭೆಯೊಂದಿಗೆ ಗುರುವಾರ ಆರಂಭಗೊಂಡಿತು.  ನಂತರ ನಡೆದ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಬಿಎಂಎಸ್ ರಾಜ್ಯ ಉಪಾಧ್ಯಕ್ಷ ವಕೀಲ ಮುರಲೀಧರನ್ ಉದ್ಘಾಟಿಸಿಸಿದರು. ಎನ್‍ಜಿಒ ಸಂಘದ ರಾಜ್ಯ ಉಪಾಧ್ಯಕ್ಷ ಆರ್.ಶ್ರೀಕುಮಾರ್ ಅಧ್ಯಕ್ಷತೆ ವಹಿಸಿದ್ದರು. 

               12 ರಂದು ಬೆಳಗ್ಗೆ 10 ಕ್ಕೆ ಕಾಸರಗೋಡು ನಗರಸಭಾಂಗಣದ 'ಗೋಪಾಲ್ ಚೆಟ್ಟಿಯಾರ್ ನಗರ'ದಲ್ಲಿ ನಡೆಯಲಿರುವ ರಾಜ್ಯ ಸಮ್ಮೇಳನವನ್ನು ಬಿಎಂಎಸ್ ಅಖಿಲ ಭಾರತ ಅಧ್ಯಕ್ಷ ಹಿರಣ್‍ಮಯೀ ಪಾಂಡ್ಯ ಉದ್ಘಾಟಿಸುವರು. ದಕ್ಷಿಣ ಕ್ಷೇತ್ರೀಯ ಸಹಕಾರ್ಯದರ್ಶಿ ಎಂ.ಪಿ.ರಾಜೀವನ್ ಪ್ರಧಾನ ಭಾಷಣ ಮಾಡುವರು. ಮಧ್ಯಾಹ್ನ 12 ಗಂಟೆಗೆ ಬಿಎಂಎಸ್ ರಾಜ್ಯಾಧ್ಯಕ್ಷ ಶಿವಾಜಿ ಸುದರ್ಶನನ್ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸುವರು. 2ಗಂಟೆಗೆ ನಡೆಯುವ ಸಾಂಸ್ಕøತಿಕ ಸಮ್ಮೇಳನವನ್ನು ಪ್ರಾಂತೀಯ ಬೌದ್ಧಿಕ್ ಪ್ರಮುಖ್ ಕೆ.ಪಿ.ರಾಧಾಕೃಷ್ಣನ್ ಉದ್ಘಾಟಿಸುವರು. ಎನ್‍ಜಿಒ ಸಂಘದ ರಾಜ್ಯ ಉಪಾಧ್ಯಕ್ಷ ಸಿ.ಬಾಬುರಾಜ್ ಅಧ್ಯಕ್ಷತೆ ವಹಿಸುವರು. ಸಂಜೆ 4ಕ್ಕೆ ಕಾಸರಗೋಡು ನಗರದಲ್ಲಿ ಭವ್ಯ ಮೆರವಣಿಗೆ ನಡೆಯಲಿದೆ. ನಂತರ ಸಂಧ್ಯಾ ರಾಗಂ ಓಪನ್ ಆಡಿಟೋರಿಯಂನಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಆರ್‍ಆರ್‍ಕೆಎಂಎಸ್ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ 'ಫೆಟೊ'ರಾಜ್ಯಾಧ್ಯಕ್ಷ ಎಸ್.ಕೆ.ಜಯಕುಮಾರ್ ಉದ್ಘಾಟಿಸುವರು. ಸಂಜೆ 7.30ಕ್ಕೆ ಸಾಂಸ್ಕøತಿಕ ಸಂಜೆ ಕಲಾಕಾರ್ಯಕ್ರಮ ನಡೆಯುವುದು.

           13ರಂದು ಬೆಳಗ್ಗೆ 8.30ಕ್ಕೆ ನಗರಸಭಾಂಗಣದ ಶಂಕರ ಗೌಡನಗರದಲ್ಲಿ ನಡೆಯುವ ರಾಜ್ಯ ಕೌನ್ಸಿಲ್ ಸಭೆಯನ್ನು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ ಮತ್ತು ಅಲ್ಪಸಂಖ್ಯಾತರ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ಉದ್ಘಾಟಿಸುವರು. ಆರ್‍ಆರ್‍ಕೆಎಂಎಸ್ ರಾಷ್ಟ್ರೀಯ ಉಪಾಧ್ಯಕ್ಷ ಪಿ.ಸುನೀಲ್ ಕುಮಾರ್ ಆಶಯ ಭಾಷಣ ಮಾಡಲಿರುವರು.   ಮಧ್ಯಾಹ್ನ 3 ಗಂಟೆಗೆ ಪದಾಧಿಕಾರಿಗಳ ಆಯ್ಕೆ, 3.30ಕ್ಕೆ ಸಮಾರೋಪ ಸಮಾರಂಭ ನಡೆಯುವುದು 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries