ಕಾಸರಗೋಡು: ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯು 2024-25 ನೇ ಸಾಲಿನಲ್ಲಿ ವಕೀಲವೃತ್ತಿ ಧನಸಹಾಯ ಯೋಜನೆಗಾಗಿ ಅರ್ಜಿ ಆಹ್ವಾನಿಸಿದೆ. 2021 ಜುಲೈ 1 ಹಾಗೂ 2024 ಜೂನ್ 30 ರ ಒಳಗಾಗಿ ಕೇರಳ ಬಾರ್ ಕೌನ್ಸಿಲ್ನಲ್ಲಿ ನೋಂದಾವಣೆಯಾಗಿರುವ ಕುಟುಂಬದ ವಾರ್ಷಿಕ ಆದಾಯ ರೂ.1,00,000 ಮೀರದ ಮತ್ತು ಕೇರಳ ರಾಜ್ಯದ ಒಳಗಡೆ ವಕೀಲವೃತಿ ಅಭ್ಯಾಸ ಮಾಡುತ್ತಿರುವ ಹಿಂದುಳಿದ ವರ್ಗಗಳಿಗೆ ಸೇರಿದ ಕಾನೂನು ಪದವೀಧರರು ಅರ್ಜಿ ಸಲ್ಲಿಸಬಹುದು.
www.egrantz.kerala.gov.in ಎಂಬ ಪೆÇೀರ್ಟಲ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿಗಳನ್ನು ಸ್ವೀಕರಿಸಲು ಜುಲೈ 31 ಕೊನೆಯ ದಿನಾಂಕವಾಗಿರುತ್ತದೆ. ಅಂತರ್ಜಾಲ ವಿಳಾಸ- ಅರ್ಜಿ ಸಲ್ಲಿಸಲು www.bcdd.kerala.gov.in www.egrantz.kerala.gov.in ಎಂಬ ಅಂತರ್ಜಾಲ ವಿಳಾಸ ಬಳಸಿಕೊಳ್ಳಬಹುದಗಿದೆ. ಈ ಬಗ್ಗೆ ಹೆಚ್ಚಿನ ಮಾಃಇತಿಗಾಗಿ ದೂರವಾಣಿ ಸಂಕ್ಯೆ(0495-2377786)ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.