ಆಲಪ್ಪುಳ: ಪ್ರತಿಪಕ್ಷವನ್ನು ಬೈದು ಹಂಗಿಸುವುದು ಪಕ್ಷಸ್ನೇಹ ಅಲ್ಲವೆಂದು ಮಾಜಿ ಸಚಿವ ಜಿ.ಸುಧಾಕರನ್ ಹೇಳಿದ್ದಾರೆ.
ಉಮ್ಮನ್ ಚಾಂಡಿ ಫೌಂಡೇಶನ್ ಮತ್ತು ಉಪಶಾಮಕ ಆರೈಕೆಯ ಉದ್ಘಾಟನಾ ಅಧಿವೇಶನದಲ್ಲಿ ಅವರು ಮಾತನಾಡುತ್ತಿದ್ದರು. ಈ ವಿಚಾರದಲ್ಲಿ ಉಮ್ಮನ್ ಚಾಂಡಿ ವಿರುದ್ಧ ಒಂದೇ ಒಂದು ಮಾತನ್ನೂ ಹೇಳುವಂತಿಲ್ಲ. ಮಾದರಿ ಪ್ರತಿಪಕ್ಷ ಸ್ನೇಹದ ವ್ಯಕ್ತಿತ್ವ ಅವರದು ಎಂದು ಸ್ಮರಿಸಿದರು.
ರಾಜಕೀಯ ಟೀಕೆ ಹೊರತು ಉಮ್ಮನ್ ಚಾಂಡಿ ಅದರಾಚೆ ಎಂದಿಗೂ ನಾಲಿಗೆ ಹರಿಯಬಿಟ್ಟವರಲ್ಲ. ವೈಯಕ್ತಿಕ ಆರೋಪ ರಾಜಕೀಯಕ್ಕೆ ಸೇರಿದ್ದಲ್ಲ ಎಂದು ಹೇಳಿದ ಅವರು ಇದು ರಾಜಕೀಯ ಪಕ್ಷಗಳಿಗೆ ಹಾನಿಯುಂಟುಮಾಡುತ್ತಿದೆ ಎಂದು ವಿಶ್ಲೇಶಿಸಿದರು.