HEALTH TIPS

ರಾಜಸ್ಥಾನ | ಹಸುವಿಗೆ ಡಿಕ್ಕಿ ಹೊಡೆದು ನದಿಗೆ ಉರುಳಿದ ಕಾರು: ಇಬ್ಬರು ಸಾವು

           ಜೈ‍ಪುರ: ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ಸೋಮವಾರ ಕಾರೊಂದು ನದಿಗೆ ಬಿದ್ದು ಇಬ್ಬರು ಸಾವಿಗೀಡಾಗಿದ್ದಾರೆ.

           ಭಾನುವಾರ ಸಂಜೆ ಖೇರ್‌ವಾಡದ ಜಲ್‌ಪಕ ಎಂಬಲ್ಲಿ ಈ ಘಟನೆ ನಡೆದಿದೆ. ಐವರು ಸ್ನೇಹಿತರು ದೇಗುಲವೊಂದಕ್ಕೆ ಭೇಟಿ ನೀಡಿ ಹಿಂದಿರುತ್ತಿದ್ದರು.

          ರಸ್ತೆ ತಿರುವಿನಲ್ಲಿ ಅಡ್ಡ ಬಂದ ಹಸುವಿಗೆ ಡಿಕ್ಕಿ ಹೊಡೆದು ಕಾರು ನದಿಗೆ ಬಿದ್ದಿದೆ.

ಮೂವರು ಕಾರಿನಿಂದ ಹೊರಗೆ ಬಂದಿದ್ದು, ಚಿರಾಗ್ ಮೇಘ್‌ವಾಲ್‌ (24) ಹಾಗೂ ತಿಕೇಶ್ ಮೀನಾ (25) ಕಾರಿನೊಳಗೆ ಸಿಲುಕಿ ದಾರುಣವಾಗಿ ಸಾವಿಗೀಡಾಗಿದ್ದಾರೆ.

            ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries