HEALTH TIPS

ತರಗತಿ ಕೊಠಡಿ ಸೇರಿಕೊಂಡ ಆಸ್ಪತ್ರೆ ಜನರೇಟರ್ ಹೊಗೆ-ಅಸೌಖ್ಯಗೊಂಡ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

                   ಕಾಸರಗೋಡು: ಆಸ್ಪತ್ರೆ ಜನರೇಟರ್‍ನಿಂದ ಹೊರಸೂಸುತ್ತಿದ್ದ ಹೊಗೆಯಿಂದ ಆಸ್ಪತ್ರೆ ಸನಿಹ ಚಟುವಟಿಕೆ ನಡೆಸುತ್ತಿದ್ದ ಶಾಲಾ ಮಕ್ಕಳು ಅಸೌಖ್ಯಗೊಂಡು ಆಸ್ಪತ್ರೆ ದಾಖಲಾದ ಘಟನೆ ಕಾಞಂಗಾಡಿನಲ್ಲಿ ನಡೆದಿದೆ. ನಲ್ವತ್ತರಷ್ಟು ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ವಿದ್ಯಾರ್ಥಿಗಳೆಲ್ಲರೂ ಚೇತರಿಸುತ್ತಿದ್ದಾರೆ.

                  ಕಾಞಂಗಾಡಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯೊಂದರ ಜನರೇಟರ್‍ನಿಂದ ಹೊರ ಸೂಸಿದ ಹೊಗೆಯಿಂದ,  ಸನಿಹ ಕಾರ್ಯಾಚರಿಸುತ್ತಿದ್ದ ಖಾಸಗಿ ಶಾಲೆಯೊಂದರ ವಿದ್ಯಾರ್ಥಿಗಳಲ್ಲಿ ಉಸಿರಾಟದ ಸಮಸ್ಯೆ ತಲೆದೋರಿತ್ತು. ಇಲ್ಲಿ ಕರೆಂಟ್ ಇಲ್ಲದ ಸಮಯದಲ್ಲಿ ಜನರೇಟರ್ ಬಳಸಲಾಗುತ್ತಿದ್ದು,  ಇದರಿಂದ ಹೊರಬರುತ್ತಿದ್ದ ಹೊಗೆ ತರಗತಿಯೊಳಗೆ ತುಂಬಿಕೊಂಡು,  ವಿದ್ಯಾರ್ಥಿಗಳಲ್ಲಿ ತಲೆ ಸುತ್ತುವಿಕೆ, ಉಸಿರಾಟ ಸಮಸ್ಯೆ ಕಂಡುಬರಲಾರಂಭಿಸಿತ್ತು. ಇದನ್ನು ಗಮನಿಸಿದ ಶಿಕ್ಷಕರು ತಕ್ಷಣ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತಕ್ಷಣ ಪೊಲೀಸರು ಹಾಗೂ ತುರ್ತು ನಿಗಾ ವಿಭಾಗ ಪಡೆಯವರು ಸ್ಥಳಕ್ಕಾಗಮಿಸಿದ್ದು ಕಾರ್ಯಾಚರಣೆ ಕೈಗೊಂಡಿದ್ದಾರೆ. ಚಿಕಿತ್ಸೆ ಅರಸಿಬಂದ ಯವುದೇ ವಿದ್ಯಾರ್ಥಿ ಸ್ಥಿತಿ ಗಂಭೀರವಾಗಿಲ್ಲ. ಚಿಕಿತ್ಸೆಯೊಂದಿಗೆ ಇವರನ್ನು ಮನೆಗೆ ಕಳುಹಿಸಿಕೊಡಲಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

              ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅವರು ಅಪರ ಜಿಲ್ಲಾಧಿಕಾರಿ ಸೂಫಿಯಾನ್ ಅಹಮ್ಮದ್ ಅವರಿಗೆ ಸೂಚಿಸಿದ್ದಾರೆ. ಜನರೇಟರ್‍ನಿಂದ ಹೊರಸೂಸುವ ಹೊಗೆ ಮೇಲ್ಮುಖವಾಗಿ ಸಂಚರಿಸುವಂತೆ ಹೊಗೆನಳಿಗೆ ಅಳವಡಿಸದಿರುವುದರಿಂದ ತರಗತಿಯೊಳಗೆ ಹೊಗೆ ತುಂಬಿಕೊಳ್ಳಲು ಕಾರಣವಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries