ಕಾಸರಗೋಡು: ಚೆನ್ನೈ ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿರುವ `ಇಂಡಿಕಾ' ಸಂಘಟನೆಯು ಈ ವರ್ಷದ "ಗುರುಶ್ರೇಷ್ಠ" ಪ್ರಶಸ್ತಿಗೆ ಹಿರಿಯ ಸಂಗೀತ ವಿದ್ವಾಂಸರಾದ ವೆಳ್ಳಿಕೋತ್ ವಿಷ್ಣು ಭಟ್ ಇವರನ್ನು ಆಯ್ಕೆ ಮಾಡಿದೆ. ಇದು ಸಾಂಪ್ರದಾಯಿಕ ಭಾರತೀಯ ಕಲೆಗಳನ್ನು ಕಲಿಸುವ ಹಾಗೂ ಪ್ರಚಾರಪಡಿಸುವವರಿಗೋಸ್ಕರ ನೀಡುವ ಪ್ರಶಸ್ತಿಯಾಗಿದೆ. ಪ್ರಸ್ತುತ ಇವರು ಪೆರಿಯ ಪರಂಪರಾ ಗೋಶಾಲೆಯ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ಪರಂಪರಾ ವಿದ್ಯಾಪೀಠದ ಸಂಗೀತ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.