ಕಾಸರಗೋಡು: ಕರ್ತವ್ಯದ ಮಧ್ಯೆ ಮಹಿಳಾ ಪೊಲೀಸ್ ಅಧಿಕಾರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಾಸರಗೋಡು ಜಿಲ್ಲೆ ನೀಲೇಶ್ವರ ಪಳ್ಳಿಕ್ಕೆರೆ ವಡಕ್ಕೇ ನೀಲಮನ ಇಲ್ಲತ್ತ್ ನಿವಾಸಿ, ಪಿ.ವಿ ನಾರಾಯಣನ್ ನಂಬೂದಿರಿ ಅವರ ಪತ್ನಿ ಹಾಗೂ ಕಣ್ಣೂರು ಮಹಿಳಾ ಕಾರಾಗೃಹ ಸಹಾಯಕ ಅಧೀಕ್ಷಕಿ ಇ.ಕೆ ಪ್ರಿಯಾ(50)ಮೃತಪಟ್ಟವರು.
ಕರ್ತವ್ಯದ ಮಧ್ಯೆ ಕುಸಿದು ಬಿದ್ದ ಇವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವ ಮಧ್ಯೆ ಸಾವು ಸಂಭವಿಸಿದೆ.