HEALTH TIPS

ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದಿಂದ ಕಾಸರಗೋಡಿನಲ್ಲಿ ವಾಚನಾ ಮಾಸಾಚರಣೆ

               ಕಾಸರಗೋಡು: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕಾಸರಗೋಡು, ಬೇಕಲ ಮತ್ತು ಹೊಸ ದುರ್ಗಾ ಉಪಜಿಲ್ಲಾ  ಘಟಕದ ವಾಚನ ಮಾಸಾಚರಣೆ ಕಾಸರಗೋಡು ಜಿ.ಯು.ಪಿ ಶಾಲೆಯಲ್ಲಿ ನಡೆಯಿತು.  

             ಕಾಸರಗೋಡು ಸರ್ಕಾರಿ ಕಾಲೇಜಿನ  ಪ್ರಾಧ್ಯಾಪಕ  ರತ್ನಾಕರ  ಮಲ್ಲಮೂಲೆ  ಸಮಾರಂಭ ಉದ್ಘಾಟಿಸಿ ಮಾತನಾಡಿ,  ಓದಿನಲ್ಲಿ  ದೇವರನ್ನು ಕಾಣಬೇಕು. ಓದುವಿಕೆಯ ಮೂಲಕ ನಾವು ಜ್ಞಾನ ಗಳಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.  ಚಂದ್ರಗಿರಿ ಕಿರಿಯ ಪ್ರಾಥಮಿಕ ಶಾಲೆಯ  ಮುಖ್ಯ ಶಿಕ್ಷಕಿ ಯಶೋದ ಟೀಚರ್ ಅಧ್ಯಕ್ಷತೆ ವಹಿಸಿದ್ದರು.  

             ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್ ಮುಖ್ಯ ಅತಿಥಿಯಗಿ ಭಾಗವಹಿಸಿದ್ದರು.  ಬೇಕಲ ಉಪಜಿಲ್ಲಾ ಶಿಕ್ಷಣಾಧಿಕಾರಿ ಅರವಿಂದ, ಬೇಕಲ  ಉಪಜಿಲ್ಲೆಯ ಅಧ್ಯಕ್ಷೆ  ರಜನಿ ಟೀಚರ್, ನಿವೃತ್ತ ಪ್ರಾಧ್ಯಾಪಕಿ ಪುಷ್ಪಲತಾ ಉಪಸ್ಥಿತರಿದ್ದರು. ಬಳಿಕ ಶಾಲಾ ಮಟ್ಟದಲ್ಲಿ ವಾಚನಾ ಮಾಸಾಚರಣೆ ಅಂಗವಾಗಿ  ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.

          ಬೇಕಲ ಎ ಇ ಒ ಅರವಿಂದ  ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ  ವಿವಿಧ  ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕಿ ರಮ್ಯಶ್ರೀ ಪ್ರಾರ್ಥನೆ ಹಾಡಿದರು.  ರೋಹಿತಾಕ್ಷಿ ಟೀಚರ್ ಸ್ವಾಗತಿಸಿದರು.  ಬಾಬು ಮಾಸ್ಟರ್ ಕಾರ್ಯಕ್ರಮವನ್ನು ನಿರೂಪಿಸಿದರು. ವಿನೋದ್ ಮಾಸ್ಟರ್ ವಂದಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries