ಬದಿಯಡ್ಕ: ವಿವಾಹ ನಿಗದಿಯಾಗಿದ್ದ ಯುವಕನ ಮೃತದೇಹ ಮನೆ ಕೊಠಡಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬದಿಯಡ್ಕ ಪಂಚಾಯಿತಿ ಗೋಳಿಯಡ್ಕ ನಿವಾಸಿ ಐತ್ತಪ್ಪ ಎಂಬವರ ಪುತ್ರ ಅನಿಲ್ ಕುಮಾರ್(26)ಮೃತಪಟ್ಟ ಯುವಕ. ಮಂಗಳವಾರ ರಾತ್ರಿ ಆಹಾರ ಸೇವಿಸಿ, ಮಲಗಿದ್ದ ಇವರು ಬುಧವಾರ ಬಹಳ ಹೊತ್ತಿನ ವರೆಗೂ ಬಾಗಿಲು ತೆರೆಯದಿರಲಿಲ್ಲ. ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಆಸುಪಾಸಿನವರು ಆಗಮಿಸಿ ಕಿಟಿಕಿ ಬಾಗಿಲು ತೆರೆದು ನೋಡಿದಾಗ ಮೃತದೇಹ ನೇಣಿನಲ್ಲಿ ನೇತಾಡುತ್ತಿರುವುದು ಕಂಡುಬಂದಿತ್ತು. ಇವರ ವಿವಾಹ ಡಿಸೆಂಬರ್ ತಿಂಗಳಲ್ಲಿ ನಡೆಸಲು ತಿರ್ಮಾನಿಸಲಾಗಿತ್ತು. ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.