ಪೆರ್ಲ: ನಾಲಂದ ಕಾಲೇಜಿನ ಆಂಟಿ ರಾಗಿಂಗ್ ಸೆಲ್ ಹಾಗೂ ಎನ್ನೆಸ್ಸೆಸ್ ಘಟಕ ಸಂಖ್ಯೆ 49 ಜಂಟಿ ಆಶ್ರಯದಲ್ಲಿ ರಾಗಿಂಗ್ ವಿರೋಧಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.
ಕಾಲೇಜು ಪ್ರಾಂಶುಪಾಲ ಶಂಕರ ಖಂಡಿಗೆ ಅಧ್ಯಕ್ಷತೆ ವಹಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಹಿರಿಯ ನಾಗರಿಕ ಪೋಲೀಸ್ ಅಧಿಕಾರಿ ಶಶಿಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ರಾಗಿಂಗ್ ಪ್ರಕರಣದ ಪರಿಣಾಮ ಹಾಗೂ ಕಾನೂನಿನ ಕುರಿತು ತರಗತಿ ನೀಡಿ ಅರಿವು ಮೂಡಿಸಿದರು. ನಾಗರಿಕ ಪೋಲೀಸ್ ಅಧಿಕಾರಿ ಸಿನು ಹಾಗೂ ಎನ್ನೆಸ್ಸೆಸ್ ಯೋಜನಾಧಿಕಾರಿ ಕಾವ್ಯಚಂದ್ರನ್ ಮಾತನಾಡಿದರು. ಆಂಟಿ ರಾಗಿಂಗ್ ಸೆಲ್ ಸಂಚಾಲಕಿ ವಿನೀಶ ಎಸ್.ವಿ. ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ರಜೀಶ ವಂದಿಸಿದರು.