HEALTH TIPS

ಗುರುವಾಯೂರಿನಲ್ಲಿ ಇಂದಿನಿಂದ ವಿ.ಐ.ಪಿ ವಿಶೇಷ ದರ್ಶನ ವ್ಯವಸ್ಥೆ ಹಿಂಪಡೆತ

              ಗುರುವಾಯೂರು: ಗುರುವಾಯೂರು ದೇವಸ್ಥಾನದಲ್ಲಿ ಇಂದಿನಿಂದ(ಜುಲೈ 1)  ಉದಯಾಸ್ತಮಾನ ಪೂಜೆಯ ಸಂದರ್ಭ ಜಾರಿಯಲ್ಲಿರುವ ವಿಐಪಿ/ವಿಶೇಷ ದರ್ಶನ ನಿರ್ಬಂಧವನ್ನು ರದ್ದುಗೊಳಿಸಲಾಗಿದೆ.

                ಗುರುವಾಯೂರ್ ದೇವಸ್ವಂ ವ್ಯವಸ್ಥಾಪನಾ ಸಮಿತಿಯು ಜುಲೈ 1 ರಿಂದ ಉದಯಾಸ್ತಮಾನ ಪೂಜಾ ದಿನಗಳಲ್ಲಿ ಜಾರಿಗೆ ತರಬೇಕಿದ್ದ ವಿಐಪಿ/ವಿಶೇಷ ದರ್ಶನ ನಿಯಂತ್ರಣವನ್ನು ಬಿಟ್ಟುಕೊಡಲು ನಿರ್ಧರಿಸಿದ್ದು, ಕೆಲಸದ ದಿನಗಳಲ್ಲಿ ದೇವಾಲಯದಲ್ಲಿ ಈಗಿರುವ ಭಕ್ತ ಸಮೂಹ ನಿಯಂತ್ರಣದಲ್ಲಿದೆ. ಇದೇ ವೇಳೆ, ಸಾರ್ವಜನಿಕ ರಜಾದಿನಗಳಲ್ಲಿ ಭೇಟಿ ನಿರ್ಬಂಧಗಳು ಮುಂದುವರೆಯುತ್ತವೆ.

                 ಹೆಚ್ಚಿನ ಭಕ್ತರಿಗೆ ಅವಕಾಶ ಕಲ್ಪಿಸಲು ಜುಲೈ 13 ರಿಂದ 16 ರ ಸಾರ್ವಜನಿಕ ರಜಾದಿನಗಳಲ್ಲಿ ಮುಂಜಾನೆ 3.30 ಕ್ಕೆ ದೇವಾಲಯವನ್ನು ತೆರೆಯಲಾಗುತ್ತದೆ. ಆ ದಿನಗಳಲ್ಲಿ ನಿತ್ಯ ದರ್ಶನ ನಿಯಂತ್ರಣವಿರುತ್ತದೆ. ಈ ಬಗ್ಗೆ ನಡೆದ ಸಭೆಯಲ್ಲಿ ಅಧ್ಯಕ್ಷ ಡಾ.ವಿ.ಕೆ. ವಿಜಯನ್ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿಯ ಸದಸ್ಯರಾದ ದಿನೇಶನ್ ನಂಬೂದಿರಿಪಾಡ್, ವಿ.ಜಿ. ರವೀಂದ್ರನ್, ಕೆ.ಪಿ. ವಿಶ್ವನಾಥನ್, ಆಡಳಿತಾಧಿಕಾರಿ ಕೆ.ಪಿ. ವಿನಯನ್ ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries