ಕಾಸರಗೋಡು: ಖಾಸಗಿ ಬಸ್ಸಿನ ವಿದ್ಯಾರ್ಥಿಗಳ ಪ್ರಯಾಣದ ಪಾಸ್ಗೆ ಹೆಚ್ಚಿನ ಶುಲ್ಕ ವಿಧಿಸುವುದನ್ನು ಪರಿಶೀಲಿಸಲು ವಿದ್ಯಾರ್ಥಿ ಪ್ರಯಾಣ ಸೌಲಭ್ಯ ಸಭೆ ನಡೆಯಿತು. ಖಾಸಗಿ ಬಸ್ ವಿದ್ಯಾರ್ಥಿಗಳಿಂದ ಹೆಚ್ಚಿನ ಶುಲ್ಕ ಪಡೆಯಲಾಗುತ್ತಿದೆ ಎಂಬ ವಿದ್ಯಾರ್ಥಿ ಪ್ರತಿನಿಧಿಗಳ ದೂರಿನ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೆಎಸ್ಆರ್ಟಿಸಿ ಬಸ್ಗಳು ಎಳೇರಿತಟ್ಟು ಕಾಲೇಜಿಗೆ ವಿದ್ಯಾರ್ಥಿಗಳ ಪಾಸ್ಗೆ ಅವಕಾಶ ನೀಡುವುದಿಲ್ಲ ಎಂಬ ದೂರಿನ ಬಗ್ಗೆಯೂ ಚರ್ಚೆ ನಡೆಯಿತು.
ಎಡಿಎಂ ಚೇಂಬರ್ ನಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಎಲ್ ಆರ್ ಜಿಲ್ಲಾಧಿಕಾರಿ ಜೆಗ್ಗಿ ಪಾಲ್ ವಹಿಸಿದ್ದರು. ಬಸ್ ಮಾಲೀಕರ ಪ್ರತಿನಿಧಿಗಳಾದ ಕೆ. ಗಿರೀಶ್, ಸಿಎ ಮೊಹಮ್ಮದ್ ಕುಂಞÂ್ಞ, ಟಿ. ಲಕ್ಷ್ಮಣನ್, ಮೋಟಾರು ವಾಹನ ನಿರೀಕ್ಷಕ ಟಿ.ಪಿ.ವತ್ಸರಾಜನ್, ಕೆ.ಎಸ್.ಆರ್.ಟಿ.ಸಿ ಕಾಸರಗೋಡು ಪ್ರತಿನಿಧಿ ಕೆ.ವಿ ಪದ್ಮರಾಜನ್, ವಿದ್ಯಾರ್ಥಿ ಪ್ರತಿನಿಧಿಗಳಾದ ಕೆ.ಪ್ರಭಿಜಿತ್, ಅಲನ್ ಜಾರ್ಜ್, ಕೆ. ಸ್ನೇಹಾ, ಆದಿತ್ಯನ್, ಟಿ. ಮಧುರಾಜ್, ಎ. ಪ್ರಮೇಶ್ ಮತ್ತಿತರರು ಭಾಗವಹಿಸಿದ್ದರು.