ತಿರುವನಂತಪುರ: ಉತ್ತರ ಕನ್ನಡ ಅಂಕೋಲಾ-ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದ ಮೊದಲ ಮೂರು ದಿನಗಳಲ್ಲಿ ಕರ್ನಾಟಕ ಸರ್ಕಾರದ ನಿರ್ಲಕ್ಷ್ಯವೇ ಅರ್ಜುನ್ ರಕ್ಷಣಾ ಕಾರ್ಯಾಚರಣೆಯನ್ನು ಈ ಮಟ್ಟದಲ್ಲಿ ಹಿನ್ನಡೆಗೆ ಕಾರಣವಾಯಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಹೇಳಿದ್ದಾರೆ.
ಕರ್ನಾಟಕ ಸರ್ಕಾರದ ನಿಷ್ಕ್ರಿಯತೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪ್ರತಿಕ್ರಿಯಿಸಬೇಕು ಎಂದು ಸುರೇಂದ್ರನ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಎಚ್ಚೆತ್ತುಕೊಂಡು ಕೆಲಸ ಮಾಡಿದ್ದರೆ ಅರ್ಜುನ್ ಜೀವಂತವಾಗಿ ಬದುಕುಳಿಯುತ್ತಿದ್ದರು. ಮೊದಲ ಮೂರು ದಿನ ಕೇವಲ ೩ ಜೆಸಿಬಿಗಳಿದ್ದವು ಎಂದು ಕೆ.ಸುರೇಂದ್ರನ್ ತಿಳಿಸಿದರು. ಆರು ದಿನಗಳ ನಂತರ ರಕ್ಷಣಾ ಕಾರ್ಯಾಚರಣೆಗೆ ಸೇನೆಯನ್ನು ಕರೆಸಲಾಯಿತು. ಕರ್ನಾಟಕದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದರೆ ಇಷ್ಟೊತ್ತಿಗೆ ದೇಶಾದ್ಯಂತ ಭಾರೀ ಪ್ರತಿಭಟನೆ, ಹೋರಾಟ ಮುಖಗಳು ಹೊರಬರುತ್ತಿದ್ದವು. ಪಿಣರಾಯಿ ಅಥವಾ ಗೋವಿಂದನ್ ಕರ್ನಾಟಕ ಸರ್ಕಾರದ ವಿರುದ್ಧ ಮೌನವಾಗಿದ್ದಾರೆ ಏಕೆಂದರೆ ಇಂಡಿ ಬಣದ ಸ್ನೇಹಿತರಾಗಿರುವುದೇ ಕಾರಣ ಎಂದವರು ಚೇಡಿಸಿದರು. ದುರಂತ ನಡೆದ ಸ್ಥಳಕ್ಕೆ ಕೇರಳದ ಒಬ್ಬ ಸಚಿವರೂ ಭೇಟಿ ನೀಡಿಲ್ಲ ಎಂದು ಸುರೇಂದ್ರನ್ ಟೀಕಿಸಿದರು.