ಉಪ್ಪಳ: ಉಪ್ಪಳ ಮಣಿಮುಂಡ ರೈಲ್ವೆ ಹಳಿಯಲ್ಲಿ ಅನ್ಯರಾಜ್ಯ ಕಾರ್ಮಿಕನೊಬ್ಬರನ ಮೃತದೇಹ ಪತ್ತೆಯಾಗಿದೆ. ಮೃತಪಟ್ಟ ವ್ಯಕ್ತಿಯನ್ನು ಉತ್ತರಪ್ರದೇಶ ನಿವಾಸಿ ಅಜಯ್ಕುಮಾರ್(36)ಎಂದು ಗುರುತಿಸಲಾಗಿದೆ.
ಸೆಂಟ್ರಿಂಗ್ ಕೆಲಸ ನಡೆಸುತ್ತಿದ್ದ ಇವರು, ಭಾನುವಾರ ಕೆಲಸಕ್ಕೆಂದು ಕೊಠಡಿಯಿಂದ ತೆರಳಿದ್ದು, ಅಲ್ಪ ಹೊತ್ತಿನ ಬಳಿಕ ರೈಲ್ವೆ ಹಳಿಯಲ್ಲಿ ಮೃತದೇಹ ಪತ್ತೆಯಘಿದೆ. ಮಂಗಳೂರಿನಿಂದ ಕಾಸರಗೋಡು ಭಾಗಕ್ಕೆ ತೆರಳಿದ ರೈಲು ಡಿಕ್ಕಿಯಾಗಿರುವುದಾಗಿ ಸಂಶಯಿಸಲಾಗಿದೆ. ಇವರ ಸಂಬಂಧಿ ನೀಡಿದ ದೂರಿನನ್ವಯ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೃತದೇಹ ಮಂಗಲ್ಪಾಡಿ ಸರ್ಕಾರಿ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ.