ಮಂಜೇಶ್ವರ : ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ, ಮುಂಜಾಗ್ರತ ಕ್ರಮ, ಆಶಾ ಕಾರ್ಯಕರ್ತರ ಅವಲೋಕನ ಸಭೆ ಮಂಜೇಶ್ವರ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ಜರಗಿತು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲವೀನಾ ಮೆಂತೆರೋ ಅಧ್ಯಕ್ಷತೆ ವಹಿಸಿದ್ದರು. ವೈದ್ಯಾಧಿಕಾರಿ ಡಾ.ಪ್ರಭಾಕರ್ ಶೆಟ್ಟಿ ರೋಗಗಳ ಬಗ್ಗೆ ಮಾಹಿತಿ ನೀಡಿದರು. ನಿರ್ವಹಿಸಬೇಕಾದ ಮುಂಜಾಗ್ರತೆಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಈ ಸಂದರ್ಭ ಆರೋಗ್ಯ ಚಟುವಟಿಕೆಗಳಲ್ಲಿ ಆಶಾ ಕಾರ್ಯಕರ್ತರ ಕರ್ತವ್ಯವನ್ನು ಅಭಿನಂದಿಸಲಾಯಿತು.
ಮಂಜೇಶ್ವರ ಅರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯತಿ ಜಂಟಿಯಾಗಿ ಸಾಂಕ್ರಾಮಿಕ ರೋಗ ತಡೆವಿಕೆಗೆ ಮತ್ತು ಮಾಹಿತಿ ನೀಡಲು ತೀರ್ಮಾನಿಸಯಿತು. ರಸ್ತೆ ಬದಿಗಳಲ್ಲಿ, ಸಾರ್ವಜನಿಕ ಸ್ಥಳಗಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಕಠಿಣ ಕ್ರಮಕ್ಕೆ ತೀರ್ಮಾನಿಸಯಿತು.
ಅರೋಗ್ಯ ದೃಷ್ಟ್ಠಿಯಿಂದ ಆಹಾರ ಸೇವನ ಕೇಂದ್ರಗಳಲ್ಲಿ, ಹೋಟೆಲ್, ಗೂಡಂಗಡಿ, ವಿವಾಹ ಸಭಾಂಗಣಗಳಲ್ಲಿ ಅರೋಗ್ಯ ಇಲಾಖೆ, ಹಸಿರು ಕ್ರಿಯಾಸೇನೆ, ಆಶಾ ಕಾರ್ಯಕರ್ತರು, ಪಂಚಾಯತಿ ನೇತೃತ್ವದಲ್ಲಿ ಪರಿಶೋಧನೆ, ದಾಳಿ ನಡೆಸಲು ತೀರ್ಮಾನ, ತ್ಯಾಜ್ಯ ಎಸೆಯುವುದು ಕಂಡರೆ ಅಂತವರ ಮಾಹಿತಿ ನೀಡಲು ಸಾರ್ವಜನಿಕರು ಮುಂದೆ ಬರಲು ಸಾರ್ವಜನಿಕರಲ್ಲಿ ವಿನಂತಿಗಳನ್ನು ನೀಡಲಾಯಿತು.
ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮೊಹಮ್ಮದ್ ಸಿದ್ದಿಕ್, ಸ್ಥಾಯಿ ಸಮಿತಿ ಅಧ್ಯಕ್ಷ ಯಾದವ ಬಡಾಜೆ, ಸದಸ್ಯರಾದ ಆದರ್ಶ ಬಿ.ಎಂ, ರೇಖಾ ಕೀರ್ತೇಶ್ವರ, ಲಕ್ಶ್ಮಣ ಬಿ.ಎಂ, ಅರೋಗ್ಯ ಇಲಾಖೆ ಯ ಅಖಿಲ್, ಜ್ಯೋತಿ, ಸಪ್ನಾ ಸಿಸ್ಟರ್ ಉಪಸ್ಥಿತರಿದ್ದರು.