ತಿರುವನಂತಪುರ: ಪೋಲೀಸರಿಗೆ ಎಂಟು ಗಂಟೆಗಳ ಕೆಲಸವನ್ನು ತ್ವರಿತವಾಗಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಪೋಲೀಸ್ ಪಡೆÉಯಲ್ಲಿನ ಘರ್ಷಣೆಯಿಂದ ಮಾತ್ರ ಆತ್ಮಹತ್ಯೆ ನಡೆಯುವುದಿಲ್ಲ. ಕೊಳೆತ ಮೃತದೇಹದಿಂದ ಪೋಲೀಸರು ದೂರ ಸರಿಯುವಂತಿಲ್ಲ ಮತ್ತು ಇದು ಪೆÇಲೀಸರ ಕರ್ತವ್ಯದ ಭಾಗವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಪೋಲೀಸರ ಆತ್ಮಹತ್ಯೆ ಮತ್ತು ಕೆಲಸದ ಹೊರೆ ಕುರಿತು ಸದನದಲ್ಲಿ ಚರ್ಚಿಸಬೇಕು ಎಂದು ಆಗ್ರಹಿಸಿ ಶಾಸಕ ಪಿ.ಸಿ.ವಿಷ್ಣುನಾಥ್ ಮಂಡಿಸಿದ ತುರ್ತು ನಿರ್ಣಯಕ್ಕೆ ಮುಖ್ಯಮಂತ್ರಿ ಉತ್ತರಿಸಿದರು.
ವಿಷ್ಣು ನಾಥ್ ಮಾತನಾಡಿ, ಪೋಲೀಸರ ಬದುಕು ಶೋಚನೀಯವಾಗಿದ್ದು, 44 ಪೋಲೀಸರೊಂದಿಗೆ 118 ಅಧಿಕಾರಿಗಳು ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಧಾನಸಭೆಯ 6 ದಿನಗಳ ಅವಧಿಯಲ್ಲಿ ಐವರು ಪೋಲೀಸರು ಪ್ರಾಣ ಕಳೆದುಕೊಂಡಿದ್ದಾರೆ ಎಂದೂ ಪಿ.ಸಿ.ವಿಷ್ಣುನಾಥ್ ಹೇಳಿದ್ದಾರೆ.
148 ಮಂದಿ ಪೋಲೀಸರಿಂದ ನಿವೃತ್ತರಾಗಿದ್ದಾರೆ. ಸ್ವತಃ ಡಿವೈಎಸ್ಪಿ ಒಬ್ಬರು ಗ್ರಾಫಿಕ್ಸ್ ಡಿಸೈನರ್ ಆಗಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದರು ಎಂದು ಪಿ.ಸಿ.ವಿಷ್ಣುನಾಥ್ ಶಾಸಕರು ಗಮನ ಸೆಳೆದರು. ಕಳಮಶ್ಶೇರಿ ಎಆರ್ಕ್ಯಾಂಪ್ನ ಚಾಲಕ ಸಿಪಿಒ ಜೋಬಿ ದಾಸ್ ಅವರ ಆತ್ಮಹತ್ಯೆ ಪತ್ರವನ್ನೂ ಶಾಸಕರು ಸದನದಲ್ಲಿ ಓದಿದರು. ಚೆನ್ನಾಗಿ ಓದಬೇಕು, ಪೆÇಲೀಸ್ ಕೆಲಸ ಬಿಟ್ಟು ಬೇರೆ ಉದ್ಯೋಗ ಮಾಡಬೇಕು, ತಾಯಿಯನ್ನು ನೋಡಿಕೊಳ್ಳಬೇಕು ಎಂದು ಜೋಬಿದಾಸ್ ಆತ್ಮಹತ್ಯೆ ಪತ್ರದಲ್ಲಿ ಬರೆದಿರುವ ಮಾತುಗಳನ್ನು ಶಾಸಕರು ಉಲ್ಲೇಖಿಸಿದ್ದಾರೆ.
ಪೋಲೀಸರಿಗೆ ಎಂಟು ಗಂಟೆಗಳ ಕರ್ತವ್ಯವನ್ನು ತ್ವರಿತವಾಗಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉತ್ತರಿಸಿದರು. ಪೋಲೀಸರಲ್ಲಿ ಆತ್ಮಹತ್ಯಾ ಪ್ರವೃತ್ತಿಯನ್ನು ತಡೆಗಟ್ಟಲು ಯೋಗ ಮತ್ತು ಕೌನ್ಸೆಲಿಂಗ್ ನಡೆಸಲಾಗುತ್ತಿದೆ. ಪೋಲೀಸ್ ಪಡೆಯಲ್ಲಿ ಕೆಲವು ಸಮಸ್ಯೆಗಳು ಮಾನಸಿಕ ಒತ್ತಡಕ್ಕೂ ಕಾರಣವಾಗಿವೆ ಎಂದು ಮುಖ್ಯಮಂತ್ರಿ ಹೇಳಿದರು.
ಆತ್ಮಹತ್ಯೆಗಳು ಹೆಚ್ಚಾಗುವುದು ಸರ್ಕಾರಕ್ಕೆ ಕಳವಳ ತರಿಸಿದೆ ಎಂದು ಮುಖ್ಯಮಂತ್ರಿ ಹೇಳಿದರು. ಯೋಗವು ಒತ್ತಡವನ್ನು ಕಡಮೆ ಮಾಡಲು ಸಹಾಯ ಮಾಡುತ್ತದೆ. 8 ಗಂಟೆ ಕರ್ತವ್ಯ ವ್ಯವಸ್ಥೆ ಎಲ್ಲಾ ಠಾಣೆಗಳಿಗೆ ತಲುಪಿಲ್ಲ. ಕೆಲ ಠಾಣೆಗಳಲ್ಲಿ ಅಳವಡಿಸಲಾಗುತ್ತಿದ್ದು, ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
24 ಗಂಟೆಯೂ ಕರ್ತವ್ಯ ನಿರ್ವಹಿಸುವ ಪೋಲೀಸರು ಎಲ್ಲಿ ಯೋಗ ಮಾಡಬಹುದು ಎಂದು ಪಿಸಿ ವಿಷ್ಣುನಾಥ್ ಪ್ರಶ್ನಿಸಿದರು. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಹೀಗಾಗಿಯೇ ಮಾನವ ಹಕ್ಕುಗಳ ಆಯೋಗ ಪ್ರಕರಣವನ್ನು ಕೈಗೆತ್ತಿಕೊಂಡಿದೆ ಎಂದು ವಿಷ್ಣುನಾಥ್ ಸ್ಪಷ್ಟಪಡಿಸಿದರು. ಪೋಲೀಸ್ ಇಲಾಖೆಯಲ್ಲಿ ಆತ್ಮಹತ್ಯೆಯನ್ನು ತುರ್ತು ವಿಷಯವಾಗಿ ಪ್ರಸ್ತುತಪಡಿಸುವುದು ಇತಿಹಾಸದಲ್ಲಿ ಇದೇ ಮೊದಲು. ಕಳೆದ 5 ವರ್ಷಗಳಲ್ಲಿ 88 ಪೋಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿಷ್ಣುನಾಥ್ ಹೇಳಿದ್ದಾರೆ.