ಕಾಸರಗೋಡು: ನಗರದ ರೋಟರಿ ಕ್ಲಬ್ ವತಿಯಿಂದ ನರೇಂದ್ರ ಮೋದಿ ಯುಗ ಪುರುಷ ಶಾಲೆಯಲ್ಲಿನ ವಿದ್ಯಾರ್ಥಿಗಳಿಗಾಗಿ ಸಮಗ್ರ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷ ಹಾಗೂ ಮಕ್ಕಳ ತಜ್ಞರಾಗಿರುವ ಡಾ. ನಾರಾಯಣ ನಾಯ್ಕ್ ಅವರು ಸಮಾರಂಭ ಉದ್ಘಾಟಿಸಿ, ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿದರು.
ರೋಟರಿ ಜಿಲ್ಲಾ ಮಾಜಿ ಗವರ್ನರ್ ಡಾ. ಹರಿಕೃಷ್ಣನ್ ನಂಬಿಯಾರ್, ಹಿರಿಯ ರೊಟೇರಿಯನ್ ಡಾ. ಶ್ರೀಧರ್ ರಾವ್ ಮಕ್ಕಳ ದಂತ ತಪಾಸಣೆ ಹಾಗೂ ಖ್ಯಾತ ಶಿಶುರೋಗ ತಜ್ಞ ಡಾ. ನಾರಾಯಣ ನಾಯ್ಕ್ ಮಕ್ಕಳ ದೈಹಿಕ ಆರೋಗ್ಯ ತಪಾಸಣೆ ನಡೆಸಿದರು.
ವೈದ್ಯರಾದ ಡಾ. ರೇಖಾ ರೈ, ಡಿಸ್ಟ್ರಿಕ್ಟ್ ಮೀಟಿಂಗ್ ಕಮಿಟಿ ಅಧ್ಯಕ್ಷ ಎಂ. ಟಿ. ದಿನೇಶ್, ರೋಟರಿ ಮಾಧ್ಯಮ ಅಧ್ಯಕ್ಷ ಆರ್. ಪ್ರಶಾಂತ್ ಕುಮಾರ್, ಆನ್ ಫಾರಂ ಅಧ್ಯಕ್ಷೆ ಬಿಂದು, ರೋಟೇರಿಯನ್ ವಿಶ್ವಜಿತ್, ಶಾಲಾ ಮುಖ್ಯ ಶಿಕ್ಷಕ ಡಾ.ಸುರೇಶ್ ಬಾಬು, ನೇತ್ರ ಚಿಕಿತ್ಸಾಲಯದ ಆರ್ಯ ಹಾಗೂ ಇತರೆ ಸಿಬ್ಬಂದಿ ವರ್ಗದವರು, ಆಡಿಯಾಲಜಿಸ್ಟ್ ಮತ್ತು ಸ್ಪೀಚ್ ಥೆರಪಿಸ್ಟ್ ಮಧುಶ್ರೀ ಕಾಮತ್, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಶಿಬಿರದಲ್ಲಿ ಸುಮಾರು 60 ಮಕ್ಕಳನ್ನು ಸಮಗ್ರ ತಪಾಸಣೆಗೆ ಒಳಪಟಿಸಲಾಯಿತು.