HEALTH TIPS

ಶಿಕ್ಷಕರ ಬ್ಯಾಂಕ್ ರಚನೆ: ಶಿಕ್ಷಣ ಸಚಿವ:- ಪಕ್ಷದ ನಿವೃತ್ತ ಶಿಕ್ಷಕರನ್ನು ಸೇರಿಸಿಕೊಳ್ಳುವ ತಂತ್ರಗಾರಿಕೆ ಎಂದ ಪ್ರತಿಪಕ್ಷ

               ಕೊಟ್ಟಾಯಂ: ಸರ್ಕಾರಿ ಶಾಲೆಗಳ ನಿವೃತ್ತ ಶಿಕ್ಷಕರೊಂದಿಗೆ ವಿಶೇಷ ತರಗತಿಗಳನ್ನು ನಡೆಸಲು ರಾಜ್ಯ ಸರ್ಕಾರದ ಕ್ರಮ ಕೈಗೊಳ್ಳಲಿದೆ.

                ಈ ನಿಟ್ಟಿನಲ್ಲಿ ಶಿಕ್ಷಕರ ಬ್ಯಾಂಕ್ ಅನ್ನು ಸಿದ್ಧಪಡಿಸಲಾಗುವುದು ಎಂದು ಸಚಿವ ವಿ.ಶಿವನ್ ಕುಟ್ಟಿ ಹೇಳುತ್ತಾರೆ. ವಿಶೇಷ ತರಗತಿಗಳು, ಶಿಕ್ಷಕರ ತರಬೇತಿಗಳು, ಪಠ್ಯಕ್ರಮ ಸುಧಾರಣೆಗಳು ಇತ್ಯಾದಿಗಳಿಗೆ ಅವರ ಸೇವೆಗಳನ್ನು ಬಳಸಿಕೊಳ್ಳುವುದು ಗುರಿಯಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿರುವರು. ಆದರೆ ವಿರೋಧ ಪಕ್ಷದ ಶಿಕ್ಷಕರ ಸಂಘಟನೆಗಳು ಇದರ ಹಿಂದೆ ಅಡಗಿರುವ ಅಪಾಯವನ್ನು ಎತ್ತಿ ತೋರಿಸುತ್ತಿವೆ. ಕೋವಿಡ್ ಅವಧಿ ಮುಗಿದರೂ ಹೊಸ ಶಿಕ್ಷಕರ ಹುದ್ದೆಗಳನ್ನು ಸೃಷ್ಟಿಸದೆ, ನಿವೃತ್ತಿ ಹೊಂದಿದ ಹುದ್ದೆಗಳಿಗೆ ಬದಲಿ ಮಾಡದೆ, ಶಾಲೆಗಳ ಅಸ್ತವ್ಯಸ್ತವಾಗಿರುವ ಪರಿಸ್ಥಿತಿಯಲ್ಲಿ ನಿವೃತ್ತ ಶಿಕ್ಷಕರನ್ನು ಮತ್ತೆ ಶಾಲೆಗೆ ಕರೆತಂದು ಕೆಲಸಕ್ಕೆ ನೇಮಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಲಾಗಿದೆ.

                 ಅವರ ಅನುಭವದ ಲಾಭ ಪಡೆಯುವುದೇ ಇದಕ್ಕೆ ಕಾರಣ. ಸರ್ಕಾರದ ನಡೆ ಈ ಮೊದಲು ಅನುಭವಿ ಶಿಕ್ಷಕರೇ ಇಲ್ಲದಂತಾಗಿದೆ. ಅನುಭವದ ಹೆಸರಿನಲ್ಲಿ ಪಕ್ಷದ ಬೆಂಬಲಿಗರನ್ನೇ ಮರು ನೇಮಕ ಮಾಡಲು ಶಿಕ್ಷಣ ಇಲಾಖೆ ತಂತ್ರಗಾರಿಕೆ ನಡೆಸುತ್ತಿದೆ ಎಂಬ ದೂರು ಕೂಡ ಇದೆ. ಇದು ಸರ್ಕಾರದ ಪರ ಶಿಕ್ಷಕರ ಸಂಘಗಳ ಹಿಂಬಾಗಿಲಿನ ನಾಯಕರನ್ನು ಮತ್ತೆ ಶಾಲೆಗಳ ಆಡಳಿತಕ್ಕೆ ತರುವ ಸೂಚನೆ ಎನ್ನಲಾಗಿದೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries