ತಿರುವನಂತಪುರ: ವ್ಯಕ್ತಿಯನ್ನು ಗೌರವಿಸಲು ಆಂಗ್ಲ ಪದಗಳ ಅಗತ್ಯವಿಲ್ಲ, ಗೌರವಾನ್ವಿತ ಎಂಬ ವಿಶೇಷಣ ಸಾಕು ಎಂದು ಮಾಜಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದರು.
ಗೋವಾ ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೈ ಅವರಿಗೆ ತಿರುವನಂತಪುರಂನ ಶ್ರೀ ಚಟ್ಟಂಬಿಸ್ವಾಮಿ ಸಂಸ್ಕøತಿ ಸಮಿತಿಯು ನೀಡುವ ಸ್ಮೃತಿ ಪೂಜಾ ವರ್ಷ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ವೆಂಕಯ್ಯ ನಾಯ್ಡು ಅವರು ಮಾತನಾಡಿದರು. ಸಮಾರಂಭದಲ್ಲಿ ವೆಂಕಯ್ಯ ನಾಯ್ಡು ಮತ್ತು ರಾಜಮನೆತನದ ಸದಸ್ಯರನ್ನು ಇಂಗ್ಲಿಷ್ ಪದಗಳನ್ನು ಬಳಸಿ ಸ್ವಾಗತಿಸಿದ ಕಾರಣ ಆ ಬಳಿಕ ಭಾಷಣದಲ್ಲಿ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ಮಕ್ಕಳಿಗೆ ಮೊದಲು ಮಾತೃಭಾಷೆ ಕಲಿಸಿ ನಂತರ ಹಿಂದಿ ಸೇರಿದಂತೆ ಇತರೆ ಭಾಷೆಗಳನ್ನು ಕಲಿಸಬೇಕು ಎಂದು ಅಭಿಪ್ರಾಯಪಟ್ಟರು. ಹೊಸ ತಲೆಮಾರಿನವರು ಇಂಗ್ಲಿಷ್ ಕಲಿಯದೆ ಹೊರಗೆ ತೆರಳುವಂತಿಲ್ಲ ಎಂದು ಭಾವಿಸುತ್ತಾರೆ. ಯಾವುದೇ ಭಾಷೆಯನ್ನು ಕಲಿಯಲು ಯಾವುದೇ ಅಭ್ಯಂತರವಿಲ್ಲ ಎಂದು ಅವರು ಹೇಳಿದರು.