ಕಾಸರಗೋಡು: ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯ ಜನರೇಟರ್ನಿಂದ ಹೊಗೆ ಸೇವಿಸಿ ಸನಿಹದ ಶಾಲೆಯ ಹಲವು ವಿದ್ಯಾರ್ಥಿನಿಯರು ದೈಹಿಕವಾಗಿ ಅಸೌಖ್ಯಗೊಮಡಿರುವ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಎಂ.ಎಲ್. ಅಶ್ವಿನಿ ಆಗ್ರಹಿಸಿದ್ದಾರೆ.
ನವಜಾತ ಶಿಶುಗಳು ಮತ್ತು ತಾಯಂದಿರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯಲ್ಲಿ ಜನರೇಟರ್ನಿಂದ ಹೊಗೆ ಸನಿಹದ ಶಾಲಾ ಕೊಠಡಿಯೊಳಗೆ ತುಂಬಿಕೊಂಡಿರುವುದು, ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗೆ ಕಾರಣವಾಘಿದೆ. ಜನರೇಟರ್ನಲ್ಲಿ ಕಲಬೆರಕೆ ಇಂಧನ ಬಳಕೆಯಾಘಿರುವ ಬಗ್ಗೆ ಸಮಗ್ರ ತನಿಖೆ ನಡೆಸಬೇಕಾಗಿದೆ. ತಕ್ಷಣ ಅಧಿಕಾರಿಗಳು ಮಧ್ಯಪ್ರವೇಶಿಸಿ ಜನರೇಟರ್ ಅನ್ನು ತರಗತಿಯ ಆಸುಪಾಸಿನಿಂದ ಸ್ಥಳಾಂತರಿಸಿ ಸುರಕ್ಷಿತ ಜಾಗದಲ್ಲಿ ಅಳವಡಿಸಬೇಕು. ಜತೆಗೆ ಎತ್ತರಕ್ಕೆ ಹೊಗೆ ಹೊರಹೋಗುವ ರೀತಿಯಲ್ಲಿ ನಳಿಗೆ ಅಳವಡಿಸಬೇಕು. ಹೊಗೆ ಹೊರ ಬಿಡುವ ವ್ಯವಸ್ಥೆ ಕಲ್ಪಿಸಬೇಕು. ಜನಸಾಂದ್ರತೆಯಿರುವ ಪ್ರದೇಶಗಳಲ್ಲಿ ದೊಡ್ಡ ಜನರೇಟರ್ ಅಳವಡಿಸಿಸುವ ಸಂದರ್ಭ ಆ ಪ್ರದೇಶದಲ್ಲಿನ ವಾಯು ಮಾಲಿನ್ಯದ ಮಟ್ಟವನ್ನು ಅಳತೆ ಮಾಡುವುದರ ಜತೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿರುವುದು ಕಾಞಂಗಾಡಿನ ಘಟನೆಯಿಂದ ಸಾಬೀತಾಗಿದೆ ಎಂದು ತಿಳಿಸಿದರು.