HEALTH TIPS

"ಪ್ರಾಂಶುಪಾಲರ ಎರಡೂ ಕಾಲು ಮುರಿಯುವೆನು": ಗುರುದೇವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘಟನೆಯಿಂದ ಬೆದರಿಕೆ

               ಕೋಝಿಕ್ಕೋಡ್: ಕೊಯಿಲಾಂಡಿ ಗುರುದೇವ ಕಾಲೇಜಿನ ಪ್ರಾಂಶುಪಾಲ ಸುನಿಲ್ ಭಾಸ್ಕರ್ ಅವರಿಗೆ ಎಸ್‍ಎಫ್‍ಐ ಬೆದರಿಕೆ ಹಾಕಿದೆ. ಪ್ರಾಂಶುಪಾಲರು ಎರಡು ಕಾಲಿಟ್ಟು ಕಾಲೇಜಿಗೆ ಪ್ರವೇಶಿಸುವುದಿಲ್ಲ, ಹೇಳಿದ್ದನ್ನು ಮಾಡುವ ಸಾಮಥ್ರ್ಯ ಎಸ್‍ಎಫ್‍ಐಗಿದೆ ಎಂಬುದು ಕ್ಷೇತ್ರ ಕಾರ್ಯದರ್ಶಿ ನವತೇಜ್ ಅವರು ಬೆದರಿಕೆ ಹಾಕಿದ್ದಾರೆ.

                ಈ ಶಿಕ್ಷಕರನ್ನು ಹೇಗೆ ಎದುರಿಸಬೇಕೆಂದು ಎಸ್‍ಎಫ್‍ಐಗೆ ತಿಳಿದಿದೆ ಎಂದು ನಾಯಕ ಬೆದರಿಕೆ ಹಾಕಿರುವರು. ಪ್ರಾಂಶುಪಾಲರನ್ನು ಹೊಡೆದು ಆಸ್ಪತ್ರೆಗೆ ಕಳುಹಿಸುವ ನಿರ್ಧಾರಕ್ಕೆ ಬಂದಿಲ್ಲ. ಅಂತಹ ನಿರ್ಧಾರ ತೆಗೆದುಕೊಂಡಿದ್ದರೆ ನಾನೇ ಮಾಡುತ್ತೇನೆ ಎಂದು ನವತೇಜ್ ಹೇಳಿದ್ದಾರೆ.

                 ಪ್ರಥಮ ವರ್ಷದ ಪದವಿ ಪ್ರವೇಶದ ವೇಳೆ ಎಸ್‍ಎಫ್‍ಐ ಕಾರ್ಯಕರ್ತರು ಪ್ರಾಂಶುಪಾಲರಿಗೆ ಕಪಾಳಮೋಕ್ಷ ಮಾಡಿ ಥಳಿಸಿದ್ದಾರೆ. ಕಾಲೇಜಿನ ಹೊರಗಿನ 15 ಮಂದಿ ಸೇರಿ ಥಳಿಸಿದ್ದಾರೆ ಎಂದು ಪ್ರಾಂಶುಪಾಲರು ಪ್ರತಿಕ್ರಿಯಿಸಿದ್ದಾರೆ. ಆದರೆ ಪೋಲೀಸರು ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕಾಲೇಜು ವಿದ್ಯಾರ್ಥಿಗಳನ್ನು ಥಳಿಸಿದ್ದಾರೆ ಎಂದು ಎಸ್‍ಎಫ್‍ಐ ಕಾರ್ಯಕರ್ತರು ನೀಡಿದ ದೂರಿನ ಮೇರೆಗೆ ಪೋಲೀಸರು ಕ್ರಮ ಕೈಗೊಂಡಿದ್ದಾರೆ.

               ಕಾಲೇಜಿನಲ್ಲಿ ಎಸ್‍ಎಫ್‍ಐ ಘಟಕದ ನೇತೃತ್ವದಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪಿಸಿದ್ದು, ಪ್ರಾಂಶುಪಾಲರು ಒತ್ತಾಯಿಸಿದರೂ ಬದಲಾಯಿಸಲು ಮುಂದಾಗಿಲ್ಲ. ಅಪೇಕ್ಷಿತ ಸಮಯದವರೆಗೆ ಇರುತ್ತದೆ ಎಂದು ಎಸ್‍ಎಫ್‍ಐ ತಿಳಿಸಿದೆ. ಆದರೆ ಇದು ಸರಿಯಾದ ಕ್ರಮವಲ್ಲ ಎಂದು ಸೂಚಿಸಿದಾಗ ಎಸ್‍ಎಫ್‍ಐ ಕಾರ್ಯಕರ್ತರ ತಂಡ ದಾಳಿ ಮಾಡಿದೆ ಎಂದು ಪ್ರಾಂಶುಪಾಲರು ಸ್ಪಷ್ಟಪಡಿಸಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries