HEALTH TIPS

ಕ್ಯಾಲಿಕಟ್ ವಿವಿ ಸಿಂಡಿಕೇಟ್: ವಿಚಾರಣೆ ಅಕ್ರಮ: ಸಿಂಡಿಕೇಟ್ ಸದಸ್ಯ ದೂರು

              ಕೋಝಿಕ್ಕೋಡ್: ಕ್ಯಾಲಿಕಟ್ ವಿವಿಯ ಸಿಂಡಿಕೇಟ್ ಚುನಾವಣೆಗೆ ಸಂಬಂಧಿಸಿದಂತೆ ಉಪಕುಲಪತಿಗಳು ಇಂದು ನಡೆಸಲು ನಿರ್ಧರಿಸಿರುವ ವಿಚಾರಣೆ ಅಕ್ರಮವಾಗಿದೆ ಎಂದು ದೂರಿ ಸಿಂಡಿಕೇಟ್ ಸದಸ್ಯ ಎ.ಕೆ. ಅನುರಾಜ್ ಕುಲಪತಿ, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಸಂಪರ್ಕಿಸಿರುವÀರು.

                   ಉಪಕುಲಪತಿಗಳು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ವರ್ತಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸಿಂಡಿಕೇಟ್ ಚುನಾವಣೆಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ವಿಜೇತರ ಹೆಸರನ್ನು ನಮೂದಿಸಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಸಿಂಡಿಕೇಟ್‍ನ ಆಯ್ದ ಸದಸ್ಯರನ್ನು ವಿಶ್ವವಿದ್ಯಾಲಯದ ಚಟುವಟಿಕೆಗಳಲ್ಲಿ ಸೇರಿಸಲಾಯಿತು. ಇದಲ್ಲದೆ, ಇಂದು ನಿಗದಿಯಾಗಿರುವ ವಿಚಾರಣೆಯು ವಿಶ್ವವಿದ್ಯಾಲಯದ ಕಾನೂನು ಮತ್ತು ವಿದ್ಯಾಭ್ಯಾಸ ಕಾನೂನಿಗೆ ವಿರುದ್ಧವಾಗಿದೆ.

                  ಹಾಲಿ ಉಪಕುಲಪತಿಗಳು, ಕುಲಸಚಿವರು ಮುಂತಾದವರು ರಾಜಕೀಯ ಒತ್ತಡಕ್ಕೆ ಮಣಿದು ವಿಶ್ವವಿದ್ಯಾಲಯದ ಹಿತಾಸಕ್ತಿ ಮರೆತು ನಿರ್ಧಾರಗಳನ್ನು ಕೈಗೊಂಡಿರುವ ಹಲವು ಪ್ರಕರಣಗಳು ಈ ಹಿಂದೆಯೂ ನಡೆದಿವೆ. ಹೀಗಾಗಿ ವಿಸಿ ಪಕ್ಷಾತೀತ ನಿರ್ಧಾರ ಕೈಗೊಳ್ಳಲು ಮುಂದಾಗಬಹುದು ಎಂಬ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆ ರದ್ದುಗೊಳಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

                  ಯಾವುದೇ ಹೊಸ ದೂರು ದಾಖಲಾಗದಿರುವಾಗ ತರಾತುರಿಯಲ್ಲಿ ವಿಚಾರಣೆ ನಡೆಸಿರುವುದು ಅನುಮಾನಾಸ್ಪದವಾಗಿದೆ ಎಂದು ಅನುರಾಜ್ ಹೇಳಿದ್ದಾರೆ. ವಿಸಿ ಸ್ಥಾನಮಾನದ ಅವಧಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಪೆÇ್ರ. ಡಾ. ಎಂ.ಕೆ. ಜಯರಾಜ್ ವಿಚಾರಣೆ ನಡೆಸಲು ನಿರ್ಧರಿಸಿದ್ದಾರೆ. ಇಬ್ಬರು ಅಭ್ಯರ್ಥಿಗಳು ಮತ ಎಣಿಕೆ ವೇಳೆ ಎತ್ತಿರುವ ದೂರುಗಳೊಂದಿಗೆ ಮತ್ತೆ ಮುಂದೆ ಬಂದಿದ್ದು, ಅಧಿಕಾರಿಗಳು ಸ್ಥಳದಲ್ಲೇ ಇತ್ಯರ್ಥಪಡಿಸಿದ್ದಾರೆ.

             ವಿಶ್ವವಿದ್ಯಾನಿಲಯ ಅಧಿಕಾರಿಗಳು ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕಾಗಿತ್ತು. ಅನುರಾಜ್ ಮಾತನಾಡಿ, ಸಿಂಡಿಕೇಟ್ ಹಾಗೂ ಸೆನೆಟ್ ಸದಸ್ಯರ ಗಮನವನ್ನು ಅನಗತ್ಯ ವಿಷಯಗಳತ್ತ ಸೆಳೆಯಲು ಸ್ವತಃ ಉಪಕುಲಪತಿಗಳೇ ಮುಂದಾಗುತ್ತಿರುವ ದುರದೃಷ್ಟಕರ ಘಟನೆ ಇಂದಿನ ವಿಚಾರಣೆಯಾಗಿದೆ ಎಂದಿರುವರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries