HEALTH TIPS

ರ್ಯಾಗಿಂಗ್ ವಿರೋಧಿ ಜಾಗೃತಿ ಅಭಿಯಾನ

                 ಕಾಸರಗೋಡು: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾಸರಗೋಡು, ಕಾಸರಗೋಡು ಟೌನ್ ಪೋಲೀಸರ ಸಹಯೋಗದಲ್ಲಿ ವಿದ್ಯಾನಗರ ಸರ್ಕಾರಿ ಕಾಲೇಜಿನಲ್ಲಿ ರ ್ಯಾಗಿಂಗ್ ವಿರೋಧಿ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಡಿಎಲ್‌ಎಸ್‌ಎ ಕಾರ್ಯದರ್ಶಿ, ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶೆ ಮರ್ಯಮ್ ಸಲೋಮಿ ಅಭಿಯಾನವನ್ನು ಆಯೋಜಿಸಿದ್ದರು. ಪೋಲೀಸ್ ಅಧಿಕಾರಿಗಳು, ವಕೀಲರು ಮತ್ತು ಪಿಎಲ್‌ವಿಗಳನ್ನೊಳಗೊಂಡ  ತಂಡವು ರ‍್ಯಾಗಿಂಗ್ ವಿರೋಧಿ ಜಾಗೃತಿಯೊಂದಿಗೆ ಕಾಲೇಜು ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಎಲ್ಲಾ ತರಗತಿಗಳಿಗೆ ತೆರಳಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿತು. ಕಾನೂನು ಸೇವಾ ಪ್ರಾಧಿಕಾರವು ಜಿಲ್ಲೆಯ ಕ್ಯಾಂಪಸ್‌ಗಳಲ್ಲಿ ರ್ಯಾಗಿಂಗ್ ವಿರೋಧಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿದೆ.

            ಡಿಎಲ್ ಎಸ್ ಎ ಸೆಕ್ಷನ್ ಆಫೀಸರ್ ಎ.ಪಿ.ಕೇಶವನ್ ಕಾಸರಗೋಡು ಟೌನ್ ಪೊಲೀಸ್ ಎಸ್ ಐ ಸಜಿಮೋನ್ ಜಾರ್ಜ್, ಕಾಲೇಜು ರ್ಯಾಗಿಂಗ್ ವಿರೋಧಿ ಸಮಿತಿ ಸಂಚಾಲಕ ರಾಧಾಕೃಷ್ಣನ್ ಬೆಳ್ಳೂರು, ಶಿಕ್ಷಕರಾದ ಅಭಿಲಾಷ್, ಲಕ್ಷ್ಮಿ, ವಕೀಲÀ್ಶರಣ್ಯ, ಪೋಲೀಸ್ ಅಧಿಕಾರಿಗಳಾದ ರಾಜೀಶ್, ಸುಜಿತ್, ಶ್ರೀಜೇಶ್, ಡಿಎಲ್ ಎಸ್ ಎ ಪಿ.ಎಲ್ .ವಿ.ಪಿ.ಕವಿತಾ, ಅಬ್ಬಾ ಮುಖಂಡರಾದ ಸೈಫುದ್ದೀನ್, ಎ.ಆರ್.ಅನಿತಾ, ಶರೀಫ್ ಮುಗು, ತಾಜುದ್ದೀನ್, ಸುನಂದಾ, ಶ್ರೀಲೇಖಾ ಇದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries