HEALTH TIPS

ಕಾಡಾನೆ ದಾಳಿ; ರಾಜು ಮೃತದೇಹದೊಂದಿಗೆ ಸ್ಥಳೀಯರ ಪ್ರತಿಭಟನೆ

             ವಯನಾಡು: ಕಾಡಾನೆ ದಾಳಿಯಿಂದ ಮೃತಪಟ್ಟ ಯುವಕನ ಶವದೊಂದಿಗೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಜನಪ್ರತಿನಿಧಿಗಳ ನೇತೃತ್ವದಲ್ಲಿ ರಸ್ತೆ ತಡೆ ನಡೆಸಲಾಗಿದೆ.

                ಮೃತ ಕಲ್ಲುಮುಕ್ ಮೂಲದ ರಾಜು ಅವರ ಮನೆಗೆ ಬಂದ ಸಚಿವ ಒಆರ್ ಕೇಳು ವಿರುದ್ಧವೂ ಆ ಪ್ರದೇಶದ ನಿವಾಸಿಗಳು ಪ್ರತಿಭಟನೆ ನಡೆಸಿರುವರು. 

               ರಾಜು ಕುಟುಂಬಕ್ಕೆ 50 ಲಕ್ಷ ಪರಿಹಾರ ಹಾಗೂ ಅವರ ಪುತ್ರನಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ವಯನಾಡಿನ ಕಲ್ಲೂರು ಮರೋಡ್ ಮೂಲದ ರಾಜು ಮೊನ್ನೆ ಸಂಜೆ ಮೃತಪಟ್ಟಿದ್ದಾರೆ. ಕಳೆದ ಭಾನುವಾರ ಕಾಡಾನೆ ದಾಳಿಯಿಂದ ರಾಜು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದರು.

             ರಾಜು ಅವರು ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಅವರ ಮನೆ ಬಳಿ ಕಾಡಾನೆ ದಾಳಿ ಮಾಡಿತ್ತು. ಗದ್ದೆಯಲ್ಲಿ ಬೀಡುಬಿಟ್ಟಿದ್ದ ಆನೆ ರಾಜುವಿನತ್ತ ನುಗ್ಗಿ ದಾಳಿ ಮಾಡಿತ್ತು. ರಾಜು ಅವರ ಮರಣೋತ್ತರ ಪರೀಕ್ಷೆಯನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೊನ್ನೆ ರಾತ್ರಿ ನಡೆಸಲಾಯಿತು, ಆದರೆ ವನ್ಯಜೀವಿ ಬೆದರಿಕೆಯ ಆಧಾರದ ಮೇಲೆ ನಿನ್ನೆ ಬೆಳಿಗ್ಗೆ ಶವವನ್ನು ಮನೆಗೆ ತರಲು ನಿರ್ಧರಿಸಲಾಗಿತ್ತು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries