HEALTH TIPS

ವಿಶ್ವಸಂಸ್ಥೆ ನೇತೃತ್ವದ ಕಾರ್ಯಾಗಾರ-ಜಿ.ಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಥಾಯ್ಲೆಂಡ್ ಪ್ರವಾಸ

                  ಕಾಸರಗೋಡು: ಥೈಲ್ಯಾಂಡ್‍ನ ಏಷ್ಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಐಟಿ) ಜಂಟಿಯಾಗಿ 'ಭೂಮಿಯ ಸಂರಕ್ಷಣೆ ಮತ್ತು ಪರಿಪಾಲನೆ ಗುರಿಯೊಂದಿಗೆ ಜಿ-20 ದೇಶಗಳು ಪ್ರಾರಂಭಿಸಿದ 'ಜಿ-20' ಗ್ಲೋಬಲ್ ಲ್ಯಾಂಡ್ ಇನಿಶಿಯೇಟಿವ್ ಕುರಿತು ಐದು ದಿನಗಳ ಕಾಲ ಥಾಯ್ಲೆಂಡ್‍ನ ಬ್ಯಾಂಕಾಕ್‍ನಲ್ಲಿ ಜುಲೈ 22 ರಿಂದ 26 ರವರೆಗೆ ನಡೆಯಲಿರುವ ಕಾರ್ಯಾಗಾರದಲ್ಲಿ      ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಬೇಬಿ ಬಾಲಕೃಷ್ಣನ್ ಪಾಲ್ಗೊಳ್ಳಲಿದ್ದಾರೆ.

               ಕಾರ್ಯಾಗಾರದಲ್ಲಿ ಜೀವ ವೈವಿಧ್ಯ ಸಂರಕ್ಷಣೆ, ಕರಾವಳಿ ನಿರ್ವಹಣೆ, ಸಂರಕ್ಷಣೆಯ ಅಗತ್ಯತೆಗಳ ಕುರಿತು ಮಂಡನೆಯಾಗಲಿದೆ. ಜಿಲ್ಲೆಗೆ ವಿಶೇಷ ಯೋಜನೆಗಳನ್ನು ಹುಡುಕುವ ಅವಕಾಶವಾಗಿ ಈ ಕಾರ್ಯಾಗಾರವನ್ನು ಪರಿಗಣಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ತಿಳಿಸಿದರು.

             ಜಲಮೂಲಗಳು ಮತ್ತು ಹಳ್ಳಗಳ ಸಂರಕ್ಷಣೆ, ವಿಪತ್ತು ನಿರ್ವಹಣಾ ಇಲಾಖೆಯೊಂದಿಗೆ ಜಿಲ್ಲೆಗೆ ಅಧಿಕೃತ ಮರ, ಹೂವು, ಪಕ್ಷಿ ಮತ್ತು ಪ್ರಾಣಿಗಳನ್ನು ಘೋಷಿಸಿ ಅವುಗಳ ರಕ್ಷಣೆಗೆ ವಿಶೇಷ ಯೋಜನೆ ರೂಪಿಸಿದ ಹೆಗ್ಗಳಿಕೆ ಕಾಸರಗೋಡು ಜಿಲ್ಲಾ ಪಂಚಾಯಿತಿಗಿದೆ.   



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries