ಬದಿಯಡ್ಕ: ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದಲ್ಲಿ ಪರಮಪೂಜ್ಯ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಪುಣ್ಯಸ್ಮರಣೆಯಲ್ಲಿ ಡಾ. ಟಿ.ಶ್ಯಾಮ ಭಟ್ ಇವರ ನೇತೃತ್ವದಲ್ಲಿ ಶ್ರೀ ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ಇವರ ಸೇವಾರೂಪದಲ್ಲಿ ಶ್ರೀದೇವರಿಗೆ ಶನಿವಾರ ಸಮರ್ಪಿಸಲ್ಪಟ್ಟ ಗುರು ಭವನದ ಉದ್ಘಾಟನ ಸಮಾರಂಭದ ಅಂಗವಾಗಿ ಸುಂದೋಪಸುಂದ ಯಕ್ಷಗಾನ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ಗಾನಕೋಗಿಲೆ ದಿನೇಶ ಅಮ್ಮಣ್ಣಾಯ ಹಾಡುಗಾರಿಕೆಯಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್ ಚೆಂಡೆಯಲ್ಲಿ, ಲವಕುಮಾರ ಐಲ ಮದ್ದಳೆಯಲ್ಲಿ ಹಾಗೂ ನಿಶ್ಚಿತ್ ಜೋಗಿ ಚಕ್ರತಾಳದಲ್ಲಿ ಜೊತೆಗೂಡಲಿದ್ದಾರೆ. ಸುಂದನ ಪಾತ್ರದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್, ಉಪಸುಂದನಾಗಿ ಪನೆಯಾಲ ರವಿರಾಜ ಭಟ್, ತಿಲೋತ್ತಮೆಯಾಗಿ ಬಡಗುತಿಟ್ಟಿನ ಪ್ರಸಿದ್ಧ ಸ್ತ್ರೀವೇಷಧಾರಿ ಸುಧೀರ್ ಉಪ್ಪೂರು, ಬ್ರಹ್ಮನಾಗಿ ಲಕ್ಷ್ಮಣಕುಮಾರ್ ಮರಕಡ, ದೇವೇಂದ್ರನಾಗಿ ದೇವಕಾನ ಶ್ರೀಕೃಷ್ಣ ಭಟ್ ಪಾತ್ರ ನಿರ್ವಹಿಸಿದರು.
ಸಂಜೆ 6ರಿಂದ ವಿದುಷಿ ನಿತ್ಯಶ್ರೀ ಮಹಾದೇವ್ ಚೆನ್ನೈ ಹಾಡುಗಾರಿಕೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ಜರಗಿತು.. ವಯಲಿನ್ನಲ್ಲಿ ವಿದ್ವಾನ್ ಇಡಪ್ಪಳ್ಳಿ ಅಜಿತ್ ಕುಮಾರ್, ಮೃದಂಗದಲ್ಲಿ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮಾ ಬೆಂಗಳೂರು, ಘಟಂನಲ್ಲಿ ವಿದ್ವಾನ್ ಪೊಳ್ಳಾಟಂಞ್ಞೂರು ಶ್ರೀಜಿತ್ ಸಾಥ್ ನೀಡಿದ್ದರು.