HEALTH TIPS

ಕೈದಿಯ ಹೇಳಿಕೆ ದಾಖಲಿಸಲು ಯತ್ನಿಸಿದ ವರದಿಗಾರರ ವಿರುದ್ಧದ ಪ್ರಕರಣ ರದ್ದು

                  ಕೊಚ್ಚಿ: ಜೈಲಿನೊಳಗೆ ನುಗ್ಗಿ ಕೈದಿಯ ಹೇಳಿಕೆ ದಾಖಲಿಸಿಕೊಳ್ಳಲು ಯತ್ನಿಸಿದ ಮಾಧ್ಯಮ ಕಾರ್ಯಕರ್ತರ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. ಇಬ್ಬರು ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಾಗಿತ್ತು.

                 2013ರಲ್ಲಿ ಸೋಲಾರ್ ಪ್ರಕರಣದಲ್ಲಿ ಪತ್ತನಂತಿಟ್ಟ ಜಿಲ್ಲಾ ಕಾರಾಗೃಹದಲ್ಲಿದ್ದ ಜೋಪ್ಪನ್ ಮೊಬೈಲ್‍ನಲ್ಲಿ ಹೇಳಿಕೆ ದಾಖಲಿಸಿಕೊಳ್ಳಲು ಯತ್ನಿಸಿದ್ದರು. ನ್ಯಾಯಮೂರ್ತಿ ಪಿವಿ ಕುಂಞÂ್ಞ ಕೃಷ್ಣನ್ ಟಿವಿ ಚಾನೆಲ್ ಕಾರ್ಯಕರ್ತರ ಮೇಲಿನ ಪ್ರಕರಣವನ್ನು ರದ್ದುಗೊಳಿಸಿದ್ದಾರೆ.

              ಮಾಧ್ಯಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವುದು ಪ್ರಜಾಪ್ರಭುತ್ವದ ಅಂತ್ಯ. ಆದರೆ ಮಾಧ್ಯಮ ಕಾರ್ಯಕರ್ತರು ಸಣ್ಣ ತಪ್ಪು ಕೂಡ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೈಕೋರ್ಟ್ ಹೇಳಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries